ಕಲ್ಲಗುಡ್ಡೆ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ
Update: 2022-08-18 04:26 GMT
ಪುತ್ತೂರು, ಆ.18: ಕಲ್ಲಗುಡ್ಡೆ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಮಿಟಿ ಅಧ್ಯಕ್ಷ ರಶೀದ್ ಹಾಜಿ ನೈತಾಡಿ ಧ್ವಜಾರೋಹಣ ನೆರೆವೇರಿಸಿದರು.
ಮದ್ರಸ ಅಧ್ಯಾಪಕ ಯೂಸುಫ್ ಶಾಹೀರ್ ಯಮಾನಿ ಪೋಳ್ಯ ಮಾತನಾಡಿದರು.
ಎಸ್ಕೆಎಸ್ ಬಿವಿ ಅಧ್ಯಕ್ಷ ಸಾಬಿತ್ ಕಲ್ಲಗುಡ್ಡೆ, ಕಾರ್ಯದರ್ಶಿ ಇಸ್ಪಾಕ್ ನೈತಾಡಿ ಸಂದೇಶ ಭಾಷಣಗೈದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಮಾಅತ್ ಕಮಿಟಿ ಕಾರ್ಯದರ್ಶಿ ಝೈನುಲ್ ಆಬಿದ್, ಜೊತೆ ಕಾರ್ಯದರ್ಶಿ ಸತಸ್ರೀಫ್ ಕಲ್ಲಗುಡ್ಡೆ, ಎಸ್ಕೆಎಸ್ಸೆಸ್ಸೆಫ್ ಕಲ್ಲಗುಡ್ಡೆ ಶಾಖೆ ಅಧ್ಯಕ್ಷ ಸುಲೈಮಾನ್ ಎಸ್.ಕೆ. ಭಾಗವಹಿಸಿದ್ದರು.
ರಫೀಕ್ ಸಿಝ್ಲರ್, ಮಹಮ್ಮದ್ ಪಂಜಳ, ಊರಿನ ನಾಗರಿಕರು, ಮದ್ರಸ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಎಸ್ಕೆಎಸ್ ಬಿವಿ ಸದಸ್ಯ ರುಮೈಝ್ ಕಲ್ಲಗುಡ್ಡೆ ಸ್ವಾಗತಿಸಿ, ನಿರೂಪಿಸಿದರು.