ವಿಧಾನಸೌಧ ಬಳಿಯ ಎಂಎಸ್ ಕಟ್ಟಡದ ನೀರಿನ ಸಂಪ್ನಲ್ಲಿ ಶವ ಪತ್ತೆ; ನೀರು ಕುಡಿದ ನೌಕರರಲ್ಲಿ ಆತಂಕ!
Update: 2022-08-18 16:58 GMT
ಬೆಂಗಳೂರು, ಆ.18: ಬೆಂಗಳೂರಿನ ವಿಧಾನಸೌಧ ಬಳಿಯ ಎಂಎಸ್ ಬಿಲ್ಡಿಂಗ್ನ ನೀರಿನ ಸಂಪ್ನಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ನೀರು ಬಳಕೆ ಮಾಡಿದ ಸರಕಾರಿ ನೌಕರರಲ್ಲಿ ಆತಂಕ ಮನೆ ಮಾಡಿದೆ.
ಘಟನೆ ಸಂಬಂಧ ಗುರುವಾರ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಂಪ್ನಿಂದ ಮೃತದೇಹವನ್ನು ಹೊರಕ್ಕೆ ತೆರೆದಿದ್ದಾರೆ. 30 ರಿಂದ 35 ವರ್ಷದೊಳಗಿನ ಅಪರಿಚಿತ ವ್ಯಕ್ತಿಯ ಮೃತದೇಹ ಎಂದು ವಿಧಾನಸೌಧ ಠಾಣಾ ಪೊಲೀಸರು ಗುರುತಿಸಿದ್ದಾರೆ.
ಕೊಲೆ ಮಾಡಿ ಮೃತದೇಹ ಎಸೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಿಭಾದಗ ಡಿಸಿಪಿ ಶ್ರೀನಿವಾಸ್ಗೌಡ, ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಗಮನಿಸಿ ಮಾಹಿತಿ ನೀಡಿದ್ದಾರೆ. ಮೃತದೇಹದ ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳಿಲ್ಲ. ಕಳೆದ ವಾರ ರಜೆಯಿದ್ದ ಕಾರಣ ಈ ಕೃತ್ಯ ನಡೆದಿರುವ ಸಾಧ್ಯತೆಗಳಿದೆ ಎಂದರು.