ಇಡ್ಯ ಗುತ್ತುಮನೆ ಅಬ್ದುಲ್ ಖಾದರ್
Update: 2022-08-26 15:15 GMT
ಮಂಗಳೂರು, ಆ.26: ಸುರತ್ಕಲ್ ಸಮೀಪದ ಇಡ್ಯದ ಗುತ್ತುಮನೆ ಅಬ್ದುಲ್ ಖಾದರ್ (77)-( ಡ್ರೈವರ್ ಬಾವಾಕ) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಮೂವರು ಪುತ್ರಿಯರು ಮತ್ತು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಸುರತ್ಕಲ್ ಬದ್ರಿಯಾ ನಗರದ ಬದ್ರಿಯಾ ಜುಮಾ ಮಸ್ಜಿದ್ನ ಮಾಜಿ ಅಧ್ಯಕ್ಷರಾಗಿದ್ದ ಅಬ್ದುಲ್ ಖಾದರ್ ವಾಹನಗಳನ್ನು ಬಾಡಿಗೆಗೆ ನೀಡುವ ಮೂಲಕ ಡ್ರೈವರ್ ಬಾವಾಕ ಎಂದೇ ಪರಿಸರದಲ್ಲಿ ಚಿರಪರಿಚಿತರಾಗಿದ್ದರು.