ಶೇಕ್ ಉಮರ್

Update: 2022-08-29 14:38 GMT

ಬ್ರಹ್ಮಾವರ: ಉಪ್ಪಿನಕೋಟೆಯ ಶೇಕ್ ಉಮರ್ ಸಾಹೇಬ್ (73) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ವೃತ್ತಿಯಲ್ಲಿ ಟೈಲರ್ ಆಗಿ ಕೆಲಕಾಲ ವಿದೇಶದಲ್ಲಿದ್ದು  ಬಳಿಕ ಬ್ರಹ್ಮಾವರದಲ್ಲಿ  ಟೈಲರ್ ಆಗಿ ಕಾರ್ಯನಿರ್ವಸಿದ್ದರು. ಕರ್ನಾಟಕ ಸ್ಟೇಟ್ ಟೈಲರ್ಸ್‌ ಆಸೋಸಿ ಯೇಶನ್ ಸಂಘಟನೆಯಲ್ಲಿ  ಉಡುಪಿ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಯಾಗಿ, ಹವ್ಯಾಸಿ ರಂಗನಟರಾಗಿ, ಉಪ್ಪಿನಕೋಟೆ ಜಾಮಿಯ ಮಸೀದಿಯ ಗೌರವಾಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ಇವರು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಮಾಜಮುಖಿ ಯಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ