ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Update: 2022-08-31 11:07 GMT

ಮಂಗಳೂರು; ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ ನಗರದ ಹಂಪನಕಟ್ಟೆಯ ಸಂಧ್ಯಾ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮಂಗಳವಾರ ನಗರದ ಶಿವರಾಮ ಕಾರಂತ ಭವನದಲ್ಲಿ ನಡೆಯಿತು.

ಪ್ರಾಂಶುಪಾಲೆ ಡಾ.ಸುಭಾಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷೆ ಚಂದ್ರಕಲಾ, ವಿದ್ಯಾರ್ಥಿ ಸಂಘದ ಸಹಾಯಕ ನಿರ್ದೇಶಕ ಡಾ.ಮಾಧವ್ ಎಂ.ಕೆ. ಮಾತನಾಡಿದರು. ವಿದ್ಯಾರ್ಥಿಗಳಾದ ಭಾಗ್ಯಶ್ರೀ, ನಂಜುಂಡ ರಾಜ್, ತಿಲಕರಾಜ್, ಕುಲಜೀತ್ ಸಿಂಗ್, ಆಶಿಶ್, ವೀರಯ್ಯ, ಅನೂಪ್ ಅನಿಸಿಕೆ ವ್ಯಕ್ತಪಡಿಸಿದರು.

ಉಪನ್ಯಾಸಕರಾದ ಡಾ. ಮೋಹನ್, ರಿಝ್ವಾನ್, ಲತಾ ಮಾತನಾಡಿದರು. ಉಪನ್ಯಾಸಕಿ ಮಧುಶ್ರೀ ಜೆ. ಶ್ರೀಯಾನ್ ಕಾರ್ಯಕ್ರಮ  ಸಂಯೋಜಿಸಿದ್ದರು, ವಿದ್ಯಾರ್ಥಿನಿ ಯಶ್ವಿತಾ ಪ್ರಾರ್ಥನೆಗೈದರು, ಉಪನ್ಯಾಸಕ ಸಂತೋಷ್ ಸ್ವಾಗತಿಸಿದರು, ಉಪನ್ಯಾಸಕ ರಾಘವೇಂದ್ರ ಸ್ಮರಣಿಕೆ ವಿತರಿಸಿದರು. ಪೂಜಾ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News