ಮನೆಯಿಂದಲೇ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ: ಬೆಂಗಳೂರು ಸಂಚಾರ ಪೊಲೀಸರ ಮನವಿ

Update: 2022-09-05 13:25 GMT

ಬೆಂಗಳೂರು, ಸೆ.5: ತಡರಾತ್ರಿ ಸುರಿದ ಮಳೆಗೆ ನಗರದ ಮಹದೇವಪುರ ವ್ಯಾಪ್ತಿಯಲ್ಲಿ ಹಲವು ರಸ್ತೆಗಳಲ್ಲಿ ನೀರು ನಿಂತಿರುವ ಹಿನ್ನೆಲೆ ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. 

ಇಲ್ಲಿನ ಫೋರಂ ವ್ಯಾಲ್ಯೂ ಮಾಲ್‍ನಲ್ಲಿ ನೀರು ತುಂಬಿದ್ದರಿಂದ ವೈಟ್‍ಫೀಲ್ಡ್ ಮುಖ್ಯ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಸ್ಪೈಸ್ ಗಾರ್ಡನ್‍ನಲ್ಲಿ ಪ್ರವಾಹದಿಂದಾಗಿ ಒಎಆರ್ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಪಾಣತ್ತೂರು ಆರ್‍ಯುಬಿಯಲ್ಲಿ ನೀರು ತುಂಬಿದ್ದರಿಂದ ಬಳಗೆರೆ ಮುಖ್ಯರಸ್ತೆಯಲ್ಲಿ ಸಂಚಾರ ನಿಲ್ಲಿಸಲಾಗಿದೆ.

ಇಕೋಸ್ಪೇಸ್ ಬಳಿಯ ಒಆರ್ ಆರ್ ಬೆಳ್ಳಂದೂರು ರೈನ್ಬೋ ಡ್ರೈವ್, ಸರ್ಜಾಪುರ ಬಳಿ ಭಾರೀ ಸಂಚಾರ ದಟ್ಟಣೆ ಕಂಡುಬಂದಿತು. ಶೋಭಾ ಪಲ್ಲಾಡಿಯಂ ಅಪಾರ್ಟ್‍ಮೆಂಟ್ ಬಳಿ ಜಲಾವೃತಗೊಂಡಿದ್ದರಿಂದ ಯೆಮಲೂರು ಮುಖ್ಯರಸ್ತೆಯಲ್ಲಿ ಹಾಗೂ ಬೋರ್‍ವೆಲ್ ರಸ್ತೆಯಲ್ಲಿಯೂ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.

ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಹೊರಗೆ ಹೋಗುವುದನ್ನು ತಪ್ಪಿಸಿ ಮತ್ತು ಮನೆಯಿಂದ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News