ಪಡುಪೆರಾರ-ಗಂಜಿಮಠ ಬಿಲ್ಲವ ಸಮಾಜ ಸೇವಾ ಸಂಘದಿಂದ ಗುರು ಜಯಂತಿ

Update: 2022-09-13 13:57 GMT

ಗುರುಪುರ, ಸೆ.13: ಇಲ್ಲಿಗೆ ಸಮೀಪದ ಪಡುಪೆರಾರ-ಗಂಜಿಮಠ ವ್ಯಾಪ್ತಿಯ ನೂತನ ಬಿಲ್ಲವ ಸಮಾಜ ಸೇವಾ ಸಂಘ(ರಿ)ದ  ವತಿಯಿಂದ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಗಣ ಗುರುಗಳ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಜಿಪಂ ಮಾಜಿ ಸದಸ್ಯ ಹಾಗೂ ಸಂಘದ ಗೌರವಾಧ್ಯಕ್ಷ ಕೃಷ್ಣ ಅಮೀನ್ ಕಾರ್ಯಕ್ರಮ ಉದ್ಘಾಟಿಸಿದರು. ಗೆಜ್ಜೆಗಿರಿ ಕ್ಷೇತ್ರದ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಹರ್ಷ ಕುಮಾರ್, ತನ್ಯಗುತ್ತಿನ ಗುರಿಕಾರ ಮೋನಪ್ಪ ಪೂಜಾರಿ, ಗೀತಾ, ಶ್ರೀಲತಾ, ಕಬೆತ್ತಿಗುತ್ತಿನ ಕಿಶೋರ್ ಪೂಜಾರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪದ್ಮನಾಭ ಪೂಜಾರಿ ನೀರಳಿಕೆ, ನಾಗೇಶ್ ಕೋಟ್ಯಾನ್, ರಾಜೇಶ್, ಲಕ್ಷ್ಮೀಶ್ ಪೂಜಾರಿ, ಸದಾಶಿವ ಪೂಜಾರಿ, ಶಶಿಕುಮಾರ್, ಕೃಷ್ಣ ಪೂಜಾರಿ, ಪ್ರದೀಪ್ ಪೂಜಾರಿ, ನವೀನ್ ಪೂಜಾರಿ, ಸುಧಾಕರ, ಮೋಹನ ಪೂಜಾರಿ, ಜಗದೀಶ ಪೂಜಾರಿ, ಕಿರಣ್, ಹರೀಶ್, ನವೀನ್, ಧನರಾಜ್, ಗಂಗಾಧರ ಅಳಿಕೆ, ಗೋಪಾಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುನಿಲ್ ಪೂಜಾರಿ ಗಂಜಿಮಠ ಸ್ವಾಗತಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News