ನಾಳೆ ನಾವೇ ಶಾಸಕರು ಸೇರಿಕೊಂಡು 'PAYCM' ಪೋಸ್ಟರ್​ ಅಂಟಿಸ್ತೀವಿ: ಡಿ.ಕೆ. ಶಿವಕುಮಾರ್

Update: 2022-09-22 09:45 GMT

ಬೆಂಗಳೂರು: ಬೆಂಗಳೂರು ನಗರದ ಹಲವೆಡೆ 'PAYCM' ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಕಾರ್ಯಕರ್ತರ ಬಂಧನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾಳೆ (ಶುಕ್ರವಾರ) ನಮ್ಮ ಪಕ್ಷದ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ ಶಾಸಕರು ಸೇರಿ ಯಾವುದಾದರೂ ಸರ್ಕಾರಿ ಕಟ್ಟಡಗಳ ಮೇಲೆ ನಮಗೆ ಅನುಕೂಲ ಆಗುವ ಸ್ಥಳಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸುವ ಬಗ್ಗೆ ತೀರ್ಮಾನ ಮಾಡಿಕೊಂಡಿದ್ದು, ನಾವು ಮಾಡುತ್ತಿರೋದರಲ್ಲಿ ತಪ್ಪೇನಿಲ್ಲ' ಎಂದು ಹೇಳಿದರು. 

'ನಾಳೆ ಪ್ರತಿಯೊಬ್ಬ ಶಾಸಕರೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಲ್ಲಬೇಕು' ಎಂದು ಇದೇ ವೇಳೆ ಅವರು ಪಕ್ಷದ ಶಾಸಕರಿಗೆ ಕೆರೆ ನೀಡಿದರು.  

ಇದನ್ನೂ ಓದಿ:  ಬೆಂಗಳೂರಿನಲ್ಲಿ PAYCM ಪೋಸ್ಟರ್ ಪ್ರಕರಣ: ಹಲವು ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News