×
Ad

​ಗಾಂಜಾ ಸೇವನೆ ಆರೋಪ: ಎಂಟು ಮಂದಿ ವಶಕ್ಕೆ

Update: 2022-09-22 20:48 IST

ಉಡುಪಿ, ಸೆ.22: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ವಿದ್ಯಾರತ್ನ ನಗರದ ರೋಯಲ್ ಎಂಬೆಸ್ಸಿ ಬಳಿ ಸೆ.20ರಂದು ಉಡುಪಿ ಸೆನ್ ಅಪರಾಧ ಠಾಣಾ ಪೊಲೀಸರು ಒಟ್ಟು ಎಂಟು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಿಷಿತ್ ವಡ್ಡೆಪಳ್ಳಿ(21), ನಿಲಯ್ ಪ್ರಶಾಂತ್ ಬಜಾರಿಯಾ(20), ವೇದಾಂತ್ ಪ್ರಶಾಂತ್ ಬಜಾರಿಯಾ(22), ವೇದಾಂತ್ ದೇಶ್ಮುಖ್(19), ಕರಣ್ ಆರ್.ಕೆ.(21), ಪೂರ್ಣ ಸೋಮೇಶ್ವರ(23), ನಿಯಾಲ್ ಗೋವೆಸ್ (20), ಕೆನ್ನೆತ್ ಡಿಸೋಜ (27) ಎಂಬವರನ್ನು ವಶಕ್ಕೆ ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯಲ್ಲಿ ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News