ಕುಂದಾಪುರ: ಯುವಕ ಆತ್ಮಹತ್ಯೆ
Update: 2022-09-23 11:23 GMT
ಕುಂದಾಪುರ : ಮುದ್ದೆಬಿಹಾಳದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮುದೋಳದ ಸುಭಾಸ ಪಾಟೀಲ (20) ಎಂಬವರು ತಾನು ರೂಮು ಮಾಡಿಕೊಂಡಿದ್ದ ಕುಂದಾಪುರದ ಶಾಸ್ತ್ರೀಪಾರ್ಕ್ ಸಮೀಪದ ಲಾಡ್ಜ್ ಒಂದರಲ್ಲಿ ಗುರುವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸುಭಾಸ ಯಾವುದೋ ವಿಚಾರದಲ್ಲಿ ಬೇಸರಗೊಂಡು ತಾನು ಕೆಲಸ ಮಾಡುತಿದ್ದ ಮುದ್ದಿಬಿಹಾಳದಿಂದ ಕುಂದಾಪುರಕ್ಕೆ ಬಂದು ಇಲ್ಲಿನ ಲಾಡ್ಜ್ನಲ್ಲಿ ರೂಮು ಮಾಡಿ ಸೆ.20ರ ಬೆಳಗ್ಗೆ 6ರಿಂದ 22ರ ಬೆಳಗ್ಗೆ 6.45ರ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಅಣ್ಣ ವೆಂಕಟೇಶ್ ಬಿರಾದರ ಪಾಟೀಲ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.