ಉಡುಪಿ: ಜಯಂಟ್ಸ್ ಗ್ರೂಪ್‌ನಿಂದ ವಿವಿಧ ಚಟುವಟಿಕೆ

Update: 2022-09-23 15:54 GMT

ಉಡುಪಿ, ಸೆ.23: ತನ್ನ ಸಾಮಾಜಿಕ ಮತ್ತು ಉದಾತ್ತ ಚಟುವಟಿಕೆಗಳಿಗೆ ಹೆಸರುವಾಸಿಯಾದ ಉಡುಪಿ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ ನೇತೃತ್ವದಲ್ಲಿ ಒಂದು ವಾರದ ನಿರಂತರ ಸಾಮಾಜಿಕ ಮತ್ತು ಉದಾತ್ತ ಚಟುವಟಿಕೆಗಳನ್ನು ಆಯೋಜಿಸಿತ್ತು.

ಉಡುಪಿಯ ಆಶಾ ನಿಲಯದಲ್ಲಿರುವ ವಿಶೇಷ ಅಗತ್ಯತೆಗಳ ಮಕ್ಕಳೊಂದಿಗೆ ಮಧ್ಯಾಹ್ನದ ಊಟದ ಬಳಿಕ ಸಂವಾದ ನಡೆಸುವ ಮೂಲಕ ವಾರದ ಕಾರ್ಯಕ್ರಮಗಳು ಗುರುವಾರ ಮುಕ್ತಾಯಗೊಂಡವು. ಇಕ್ಬಾಲ್ ಮನ್ನಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕಾಗಿ ಶಾಲಾ ಆಡಳಿತ ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದರು.

ಜಯಂಟ್ಸ್ ಉಡುಪಿಯ ನಿರ್ದೇಶಕ ಮಂಡಳಿ ಜಗದೀಶ್ ಅಮೀನ್ ಮಾತನಾಡಿದರು. ಜಯಂಟ್ಸ್‌ನ ಉಪಾಧ್ಯಕ್ಷ ಯಶವಂತ್ ಸಾಲಿಯಾನ್, ಆಡಳಿತ ನಿರ್ದೇಶಕಿ ರೋಶನ್ ಬಲ್ಲಾಳ್, ಮಾಜಿ. ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ಆಶಾ ನಿಲಯ ಶಿಕ್ಷಕ ಸಿಬ್ಬಂದಿ ಶೈಲಾ ಅಮ್ಮಣ್ಣವರ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News