ಬೆಂಗಳೂರು | ಬ್ಯಾಂಕ್ ಚೆಕ್ಗಳ ದುರ್ಬಳಕೆ ಮಾಡಿ, ಉದ್ಯಮಿಗೆ ಪ್ರಾಣ ಬೆದರಿಕೆ: ಎಫ್ಐಆರ್ ದಾಖಲು
Update: 2022-09-23 16:32 GMT
ಬೆಂಗಳೂರು, ಸೆ.23: ನಗರದ ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯ ಚೆಕ್ಗಳನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಪಡೆದಿರುವುದಲ್ಲದೆ, ಅವರಿಗೆ ಪ್ರಾಣ ಬೆದರಿಕೆವೊಡ್ಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಗರದ ರಿಚ್ಮಂಡ್ ಟೌನ್ ನಿವಾಸಿಯೂ ಆಗಿರುವ ಉದ್ಯಮಿ ಅನ್ವರ್ ಮುಹಮ್ಮದ್ ಫಹಿಮ್ ಅವರಿಗೆ ದುಷ್ಕರ್ಮಿಗಳು ವಂಚನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದು, ಈ ಸಂಬಂಧ ಇಲ್ಲಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಪ್ರಕರಣ ಸಂಬಂಧ ಆರೋಪಿಗಳಾದ ಮುಹಮ್ಮದ್ ಬಶೀರ್, ಮೈಲಾರ್, ಇಮ್ರಾನ್ ಖಾನ್ ಜಾಗೀರದಾರ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 384, 406, 418, 420, 465, 420, 468, 471, 506 ಅಡಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.