ಸುನ್ನೀ ಮಹಲ್ ಫೆಡರೇಶನ್ ಉಪ್ಪಿನಂಗಡಿ ವಲಯ ಅದ್ಯಕ್ಷರಾಗಿ ಎಸ್.ಬಿ.ದಾರಿಮಿ

Update: 2022-09-25 14:26 GMT
ಎಸ್.ಬಿ.ದಾರಿಮಿ

ಉಪ್ಪಿನಂಗಡಿ, ಸೆ.25: ಮಸೀದಿಗಳನ್ನು ಕೇಂದ್ರವಾಗಿಟ್ಟುಕೊಂಡು ಮುಸ್ಲಿಮರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮೊಹಲ್ಲಾ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಸಂಯೋಜಿಸುವ ಭಾಗವಾಗಿ ಸಮಸ್ತದ ಮಾರ್ಗದರ್ಶನ ದಂತೆ ಸುನ್ನಿ ಮಹಲ್ ಫೆಡರೇಶನ್ ವಲಯ ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದೆ.

ಅದರಂತೆ ಉಪ್ಪಿವಂಗಡಿ ವಲಯ ಸಮಿತಿಯನ್ನು ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಕೇಂದ್ರ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ರಚಿಸಲಾಯಿತು. ಸಯ್ಯದ್ ಅನಸ್ ತಂಳ್‌ರ  ದುಆಗೈದರು. ನಝೀರ್ ಅಝ್‌ಹರಿ ಬೊಲ್ಮಿನಾರ್ ಸಭೆಯ ಉಸ್ತುವಾರಿ ವಹಿಸಿದ್ದರು.

ಎಸ್‌ಎಂಎಫ್ ಉಪ್ಪಿನಂಗಡಿ ವಲಯ ಅಧ್ಯಕ್ಷರಾಗಿ ಎಸ್‌ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ. ಹಮೀದ್‌ಕರಾವಳಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಹಾಜಿ ಕೊಳೆ ಜಾಲ್, ಉಪಾಧ್ಯಕ್ಷರಾಗಿ ಸಯ್ಯದ್ ಅನಸ್ ತಂಳ್. ಅಶ್ರಫ್ ಹಾಜಿ ಸಿ.ಟಿ., ಹಸೈನಾರ್ ಹಾಜಿ ಬಂಡಾಡಿ, ಜತೆ ಕಾರ್ಯದರ್ಶಿಯಾಗಿ ಎಚ್. ಯೂಸುಪ್ ಹಾಜಿ, ಮುಹಮ್ಮದ್ ಕರುವೇಲ್, ಅಬ್ದುಲ್ ಸಮದ್ ಕೂಕ್ಕಡ, ಜಿಲ್ಲಾ ಕೌನ್ಸಿಲರಾಗಿ ಅದ್ನಾನ್ ಅನ್ಸಾರಿ, ಸದಸ್ಯರಾಗಿ ಯೂಸುಫ್ ಹಾಜಿ ಪೆದಮಲ್, ಮುಹಮ್ಮದ್ ಕೂಟೆಲ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News