ಜನರಿಗೆ 15 ಕೋ.ರೂ.ವಂಚನೆ: ಆರೋಗ್ಯ ಸಚಿವಾಲಯದ ಇಬ್ಬರು ಸಿಬ್ಬಂದಿ ಸೇರಿದಂತೆ ಐವರ ಬಂಧನ

Update: 2022-09-25 18:37 GMT

ಹೊಸದಿಲ್ಲಿ,ಸೆ.25: ವಿವಿಧ ರಾಜ್ಯಗಳಿಗೆ ಕೋವಿಡ್ ಲಸಿಕೆಗಳ ಸಾಗಾಣಿಕೆಗಾಗಿ ಕಾರ್ಯಾದೇಶಗಳನ್ನು ಕೊಡಿಸುವ ನೆಪದಲ್ಲಿ ಜನರಿಗೆ 15 ಕೋ.ರೂ.ಗಳನ್ನು ವಂಚಿಸಿದ ಆರೋಪದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಇಬ್ಬರು ಸಿಬ್ಬಂದಿಗಳು ಸೇರಿದಂತೆ ಐವರನ್ನು ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಬಂಧಿಸಿದೆ.

ಹೆರ್ಮನ್ ಸಭ್ರೆವಾಲ್,ಗೋವಿಂದ ತುಲ್ಸಿಯಾನ,ದಿಪರ್ಣಾ ತಿವಾರಿ,ತ್ರಿಲೋಕ ಸಿಂಗ್ ಮತ್ತು ಮೃತ್ಯುಂಜಯ ರಾಯ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಪೈಕಿ ಸಿಂಗ್ ಮತ್ತು ತಿವಾರಿ ಆರೋಗ್ಯ ಸಚಿವಾಲಯದ ಸಿಬ್ಬಂದಿಗಳಾಗಿದ್ದಾರೆ.

ಆರೋಪಿಗಳು ತಮಗೆ 15 ಕೋ.ರೂ.ಗಳನ್ನು ವಂಚಿಸಿರುವುದಾಗಿ ಸುನಿಲ ಕೌಶಿಕ್ ಮತ್ತು ಇತರರು ದಿಲ್ಲಿ ಪೊಲೀಸರಿಗೆ ದೂರುಗಳನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News