ಕಾರು ಕಳವು ಪ್ರಕರಣ: ದಂಪತಿ ಬಂಧನ

Update: 2022-09-26 12:15 GMT

ಬೆಂಗಳೂರು, ಸೆ.26: ಕಾರು ದೋಚಿ ಪರಾರಿಯಾಗಿದ್ದ ಆರೋಪದಡಿ ಮಂಜುನಾಥ್ ಹಾಗೂ ಆತನ ಪತ್ನಿಯನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಲಹಂಕ ಉಪನಗರ ಠಾಣೆಯ ಮಂಜುನಾಥ್ (27) ಹಾಗೂ ಆತನ ಪತ್ನಿ ವೇದಾವತಿ(25)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಸೆ.5ರಂದು ಬಂಧಿತ ಮಂಜುನಾಥ್ ಹಾಗೂ ಆತನ ಪತ್ನಿ ರಾತ್ರಿ ನಾಗನಹಳ್ಳಿ ಗೇಟ್ ಬಳಿ ಕಾರೊಂದನ್ನು ಪಡೆದು ನಗರದಲ್ಲಿ ಸುತ್ತಾಡಿಸುವಂತೆ ಕಾರು ಚಾಲಕನಿಗೆ ಹೇಳಿ ಚಾಲಕನೊಂದಿಗೆ ಸ್ನೇಹ ಬೆಳಸಿದ್ದಾರೆ. ಬಳಿಕ ಚಾಲಕ ಮಲಗಿದ್ದಾಗ ಜೇಬಿನಿಂದ ಕಾರಿನ ಕೀ ತೆಗೆದುಕೊಂಡು ಇಬ್ಬರು ಪರಾರಿಯಾಗಿದ್ದಾರೆ. 

ಈ ಸಂಬಂಧ ಯಲಹಂಕ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಕಾರು, ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News