ಮಂಗಳೂರು: ಕಟ್ಟಡ ನಿರ್ಮಾಣ ಉದ್ಯಮದ ಪ್ರದರ್ಶನ-ಸಮ್ಮೇಳನ ‘ಬಿಗ್ ಶೋ’ಗೆ ಉತ್ತಮ ಪ್ರತಿಕ್ರಿಯೆ

Update: 2022-10-02 07:36 GMT

ಮಂಗಳೂರು, ಅ.2: ಝೆಡ್‌ಎಂಝೆಡ್ ಈವೆಂಟ್ಸ್‌ನ ಸಂಯೋಜನೆಯಲ್ಲಿ ಶಂಕರ ಬಿಲ್ಡ್ ಪ್ರೋ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ಐಐಐಡಿ ಮಂಗಳೂರು ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಕಟ್ಟಡ ನಿರ್ಮಾಣ ಉದ್ಯಮದ ಬೃಹತ್ ಪ್ರದರ್ಶನ ಮತ್ತು ಸಮ್ಮೇಳನ ‘ಬಿಗ್ ಶೋ’ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಉದ್ಘಾಟನೆಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ‘ಬಿಗ್ ಶೋ’ ಉದ್ಘಾಟಿಸಿದರು.

ಈವೆಂಟ್ಸ್‌ನ ಅಧ್ಯಕ್ಷ ಮುಹಮ್ಮದ್ ಹುಸೈನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟೀರಿಯರ್ ಡಿಸೈನರ್ಸ್‌ ಚೆಯರ್‌ಮ್ಯಾನ್‌, ಆರ್ಕಿಟೆಕ್ಟ್ ಮುಹಮ್ಮದ್ ನಿಸಾರ್, ಶಂಕರ ಬಿಲ್ಡ್ ಪ್ರೋ ಸಂಸ್ಥೆಯ ಆಡಳಿತ ನಿರ್ದೇಶಕ ಸುಕುಮಾರ್ ಶ್ರೀನಿವಾಸ್, ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಮಾಜಿ ಅಧ್ಯಕ್ಷ ಕೃಷ್ಣರಾವ್ ಜೈಸಿಂ, IIA ಉಪಾಧ್ಯಕ್ಷರಾದ ಸುಪ್ರಿಯ್‌ ಆಳ್ವ, KCCI ಅಧ್ಯಕ್ಷರಾದ ಗಣೇಶ್‌ ಕಾಮತ್‌, AK Group ಅಧ್ಯಕ್ಷರಾದ ಎಂ ಅಹ್ಮದ್‌, ಶಂಕರ ಬ್ಯುಲ್ಡ್‌ ಪ್ರೊ ಇದರ ಧನಂಜಯ್‌  ಮೊದಲಾದವರು ಉಪಸ್ಥಿತರಿದ್ದರು.

ಝೆಡ್‌ಎಂಝೆಡ್ ಈವೆಂಟ್ಸ್‌ನ ಆಡಳಿತ ನಿರ್ದೇಶಕ ಝಹೀರ್ ಅಹ್ಮದ್ ಸ್ವಾಗತಿಸಿದರು. ರಿಫಾ ಮತ್ತು ಮಾಯಾ ಕಾರ್ಯಕ್ರಮ ನಿರೂಪಿಸಿದರು.

‘ಬಿಗ್ ಶೋ’ ರವಿವಾರವೂ ಇರಲಿದ್ದು, ಕಟ್ಟಡ ನಿರ್ಮಾಣ ಉದ್ಯಮದ ವಿವಿಧ ವಿಭಾಗಳಿಗೆ ಸಂಬಂಧಿಸಿದ 100ಕ್ಕೂ ಅಧಿಕ ವಿವಿಧ ಬ್ರಾಂಡ್‌ಗಳ ಉತ್ಪನ್ನಗಳ ಪ್ರದರ್ಶನ ಇದಾಗಿದೆ. ಪ್ರದರ್ಶನದ ಜತೆಗೆ ಕಟ್ಟಡ ನಿರ್ಮಾಣದ ತಜ್ಞರಿಂದ ಕೂಡಿದ ಸಮ್ಮೇಳನವನ್ನೂ ಆಯೋಜಿಸಲಾಗಿದೆ.

‘ಬಿಗ್ ಶೋ’ ಕಟ್ಟಡ ನಿರ್ಮಾಣ ಉದ್ಯಮದ ಬೃಹತ್ ಪ್ರದರ್ಶನ ಮತ್ತು ಸಮ್ಮೇಳನಕ್ಕೆ ಜನರಿಂದ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ ಎಂದು ಝೆಡ್‌ಎಂಝೆಡ್ ಈವೆಂಟ್ಸ್‌ನ ಆಡಳಿತ ನಿರ್ದೇಶಕ ಝಹೀರ್ ಅಹ್ಮದ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News