ಸರಸ್ವತಿ ಹೆಬ್ಬಾರ್

Update: 2022-10-05 12:18 GMT

ಶಿರ್ವ, ಅ.5: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಹೆಬ್ಬಾರ್ ಮನೆತನದ ದಿ.ಸುಬ್ರಾಯ ಹೆಬ್ಬಾರ್‌ ರವರ ಪತ್ನಿ ಸರಸ್ವತಿ ಎಸ್.ಹೆಬ್ಬಾರ್(86) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು.

ಅವರು ಶ್ರೀಕ್ಷೇತ್ರ ಕಟ್ಟಿಂಗೇರಿ ಬ್ರಹ್ಮಲಿಂಗೇಶ್ವರ ದೇವಳದ ಧರ್ಮದರ್ಶಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ, ಮಾಜಿ ತಾಪಂ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ