ಕಲ್ಕೂರ ಪ್ರತಿಷ್ಠಾನದಿಂದ ಅಕ್ಷರ ಅಭ್ಯಾಸ ಕಾರ್ಯಕ್ರಮ

Update: 2022-10-05 14:03 GMT

ಮಂಗಳೂರು, ಅ.5: ನಗರದ ಕದ್ರಿ ಕಂಬಳದ ಮಂಜುಪ್ರಾಸದದಲ್ಲಿರುವ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮಕ್ಕಳ ಅಕ್ಷರ ಅಭ್ಯಾಸ  ಕಾರ್ಯಕ್ರಮ ಜರಗಿತು.

ಹಿರಿಯ ಮಕ್ಕಳಿಗೆ ಪುನರಪಿ ಅಕ್ಷರ ಅಭ್ಯಾಸಗಳು, ಸಂಗೀತ ಶುಭಾರಂಭ, ವಾದ್ಯ ಪರಿಕರಗಳ ಸಂಗೀತ ಅಭ್ಯಾಸ ನಡೆಸಲಾಯಿತು.

ಕದ್ರಿ ದೇವಸ್ಥಾನದ ಪ್ರಧಾನ ಆರ್ಚಕ ಪ್ರಭಾಕರ ಅಡಿಗ ಚರ್ತುವೇದಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ಜರ್ನಾನ ಹಂದೆ, ವಿಜಯಲಕ್ಷ್ಮಿ ಶೆಟ್ಟಿ, ಕೂಟ ಮಹಾಜಗತ್ತಿನ ಅಧ್ಯಕ್ಷ ಚಂದಶೇಖರ ಮಯ್ಯ, ಮಂಜುಳಾ ಶೆಟ್ಟಿ, ಸೇರಾಜೆ ಜಿ.ಕೆ. ಭಟ್, ವಿನೋದ ಕಲ್ಕೂರ, ಲಕ್ಷ್ಮಿ ನಾರಾಯಣ ಕಲ್ಕೂರ, ವಿದ್ಯಾ ಕಲ್ಕೂರ, ಬಿ. ಅಶ್ವತಾಮ ರಾವ್, ಮುರಳಿ ಭಟ್ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಸ್ವಾಗತಿಸಿದರು. ಸುಧಾಕರ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News