ಇಲಲ್ -ಮದೀನಾ ರಬೀಹ್ ಅಭಿಯಾನಕ್ಕೆ ಚಾಲನೆ

Update: 2022-10-07 13:40 GMT

ಮಂಗಳೂರು, ಅ.7: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನದ ಮಾಸಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಇಲಲ್ -ಮದೀನಾ ರಬೀಹ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಕಿಸಾ ಕಚೇರಿಯಲ್ಲಿ ನಡೆಯಿತು.

ಅಕಾಡಮಿಯ ಅಧ್ಯಕ್ಷ ಮೌಲಾನ ಅಲ್ಹಾಜ್ ಕೆ.ಎಸ್.ಹೈದರ್ ದಾರಿಮಿ ಕರಾಯ ಅಧ್ಯಕ್ಷತೆ ವಹಿಸಿದ್ದರು. ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಉದ್ಘಾಟಿಸಿದರು. ಎಸ್‌ಕೆಎಸೆಸ್ಸೆಫ್ ರಾಜ್ಯ ಕಾರ್ಯಾಧ್ಯಕ್ಷ ಖಾಸಿಂ ದಾರಿಮಿ ನಂದಾವರ ರಬೀಹ್ ಸಂದೇಶ ನೀಡಿದರು. ಸಭೆಯಲ್ಲಿ ಕೆ.ಎಂ.ಎಸ್.ಫೈಝಿ ಕರಾಯ, ನೌಶಾದ್ ಹಾಜಿ ಸೂರಲ್ಪಾಡಿ, ಸಿತಾರ್  ಮಜೀದ್ ಹಾಜಿ ಕಣ್ಣೂರು, ಎಂ.ಎ. ಅಬ್ದುಲ್ಲಾ ಬೆಳ್ಮ ಮುಹಮ್ಮದ್ ಹಿಲಾಲ್ ರಾಫಿ ಉಪಸ್ಥಿತರಿದ್ದರು.

ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಮುಸ್ತಫಾ ಫೈಝಿ ಕಿನ್ಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News