ಭಾಸ್ಕರ ವಿಷ್ಣು ಭಟ್

Update: 2022-10-15 14:08 GMT

ಭಟ್ಕಳ: ಶಿಕ್ಷಣ ಇಲಾಖೆಯಲ್ಲಿ ಸರ್ವಶಿಕ್ಷಾ ಅಭಿಯಾನದ ಜಂಟಿ ಆಯುಕ್ತರಾಗಿ ನಿವೃತ್ತರಾಗಿದ್ದ ಭಾಸ್ಕರ ವಿಷ್ಣು ಭಟ್ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಸ್ವಗೃಹದಲ್ಲಿ ಅ.14ರಂದು ರಾತ್ರಿ ನಿದರಾದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮುಂಡಗೋಡ, ಭಟ್ಕಳ, ಕಾರವಾರ,  ಸವದತ್ತಿ, ನರಗುಂದಗಳಲ್ಲಿ ಸೇವೆ ಸಲ್ಲಿಸಿದ್ದ ಭಾಸ್ಕರ ಭಟ್ ಇವರು ನಂತರ ಭಡ್ತಿ ಹೊಂದಿ ಧಾರವಾಡದಲ್ಲಿ ಡಿ.ಡಿ.ಪಿ.ಐ. ಆಗಿ ಸೇವೆ ಸಲ್ಲಿಸಿ  ಸರ್ವಶಿಕ್ಷಣ ಅಭಿಯಾನದ ಜಂಟಿ ಆಯುಕ್ತರಾಗಿ ಬೆಂಗಳೂರಿನಲ್ಲಿ ಸೇವೆಯಲ್ಲಿರುವಾಗ ನಿವೃತ್ತಿ ಹೊಂದಿದ್ದರು.

ಮೂಲತಃ ಕುಮಟಾದ ಬೆತ್ತಗೇರಿಯವರು. ಭಟ್ಕಳದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವಾಗ ಇಲ್ಲಿನ ಹವ್ಯಕ ಸಮಿತಿಯನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದ ಇವರು ಪತ್ನಿ, ಪುತ್ರಿ ಐ.ಆರ್.ಎಸ್. ಅಧಿಕಾರಿ ಕೃತಿ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಯಾನಂದ ಪೈ
ಕೇಶವ ಮಂಚಿ
ನೂರ್ ಜಹಾನ್
ಸಿ.ಸುಂದರ್