ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪಾದಯಾತ್ರೆ

Update: 2022-10-15 17:01 GMT

ಸುರತ್ಕಲ್, ಅ.15: ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ಅಕ್ಟೋಬರ್ 18ರಂದು ನಡೆಯಲಿರುವ ಟೋಲ್ ಗೇಟ್ ಮುತ್ತಿಗೆ ಹೋರಾಟದ ಪ್ರಚಾರಾರ್ಥವಾಗಿ ಸುರತ್ಕಲ್ ಪೇಟೆಯಲ್ಲಿ ಸಮಾನ ಮನಸ್ಕ ಸಂಘಟನೆಗಳು  ಪಾದಯಾತ್ರೆ ನಡೆಸಿ ವ್ಯಾಪಕ ಪ್ರಚಾರ ನಡೆಸಿದರು.

ಇದೇ ವೇಳೆ ಸುರತ್ಕಲ್ ನಗರದಲ್ಲಿ ವಿವಿಧ ಪಕ್ಷ, ಸಂಘಟನೆಗಳ ಸಹಯೋಗದಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಜನರನ್ನು ಅ.18 ರಂದು ನಡೆಯಲಿರುವ ಟೋಲ್ ಗೇಟ್ ಮುತ್ತಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಈ ಸಂದರ್ಭ ಮಾಜಿ ಶಾಸಕ ಮೊಯ್ದೀನ್ ಬಾವ, ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪುರಷೋತ್ತಮ್ ಚಿತ್ರಾಪುರ, ರಾಘವೇಂದ್ರ ರಾವ್,  ಮುಹಮ್ಮದ್ ಕುಂಜತ್ತಬೈಲ್, ರಾಜೇಶ್ ಶೆಟ್ಟಿ ಪಡ್ರೆ, ಬಿ.ಕೆ. ಇಮ್ತಿಯಾಜ್, ರಾಜೇಶ್ ಕುಲಾಯಿ, ಬಿ.ಕೆ. ತಾರಾನಾಥ್, ಸಮರ್ಥ ಭಟ್, ಬಷೀರ್ ಬೈಕಂಪಾಡಿ, ಅಯಾಝ್ ಕೃಷ್ಣಾಪುರ, ಅದ್ದು, ಅಬೂಬಕರ್, ಉಸ್ಮಾನ್ ಕೃಷ್ಣಾಪುರ, ಶ್ರೀನಾಥ್ ಕುಲಾಲ್, ಮಸೂದ್ ಬಿ.ಕೆ., ಹಿದಾಯತ್ ಬಿ.ಕೆ., ಮಂಗಳೂರು ಬಾವ, ಗಂಗಾಧರ್ ಬಂಜನ್, ಮಂಜುಳಾ ನಾಯಕ್ ಮುಂತಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News