×
Ad

ಮೋದಿ ಆಡಳಿತ ಸೂತ್ರದಿಂದ ದೇಶಕ್ಕೆ ಯಶಸ್ಸು: ಡಿ.ವಿ.ಸದಾನಂದಗೌಡ

Update: 2022-10-16 17:11 IST
 ಡಿ.ವಿ.ಸದಾನಂದಗೌಡ

ಬೆಂಗಳೂರು, ಅ.16: ಪ್ರಧಾನಿ ಮೋದಿಯವರ (Narendra Modi) ಆಡಳಿತ ಸೂತ್ರದ ಮೂಲಕ ಭಾರತ ಮುಂದಿನ ದಿನಗಳಲ್ಲಿ ಯಶಸ್ವಿ ರಾಷ್ಟ್ರವಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ (D. V. Sadananda Gowda) ವಿಶ್ವಾಸವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ರಾಜಾಜಿನಗರದ ನಿಜಲಿಂಗಪ್ಪ ಕಾಲೇಜಿನಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಸಂಚಾಲಕರು, ಸಹ-ಸಂಚಾಲಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಗುಲಾಮಗಿರಿಯ ಅಂಶಗಳು ನಮ್ಮ ರಕ್ತದಲ್ಲಿವೆ. ಈ ದಾಸ್ಯದ ಗುರುತುಗಳನ್ನು ತೊಲಗಿಸಿ ಹೊಸ ಆಡಳಿತ ಸೂತ್ರ ನೀಡಲು ಮೋದಿ ಮುಂದಾಗಿದ್ದಾರೆ. ಇದು ಕೇವಲ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ' ಎಂದು ವಿಶ್ಲೇಷಿಸಿದರು.

‘ದಾಸ್ಯದ ಗುರುತೇ ಇರಬಾರದೆಂಬ ಚಿಂತನೆ ಅವರದ್ದು. ಅವರು ಮಾತುಗಳಿಗಿಂತ ಕೃತಿ ಮುಖ್ಯ ಆಗಬೇಕು. ಭವಿಷ್ಯದಲ್ಲಿನನಗೆ ಪ್ರಕೋಷ್ಠಗಳಲ್ಲಿ ತೊಡಗಿಕೊಳ್ಳುವ ಇಚ್ಛೆ ಇದೆ. ಸರ್ವಸ್ವತಿ ಸರ್ವ ವ್ಯಾಪಿ, ಸರ್ವವೇದ್ಯ ಆದಾಗ ರಾಜಕೀಯವು ಯಶಸ್ಸು ಪಡೆಯುತ್ತದೆ.ಮೋದಿಜಿ ಇದೀಗ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂದಿರಾ ಗಾಂಧಿ, ವಿ.ಪಿ.ಸಿಂಗ್ ಅವರಿಗಿಂತ ಹೆಚ್ಚು ಜನಾಶೀರ್ವಾದವನ್ನು ಮೋದಿಯವರು ಪಡೆದಿದ್ದಾರೆ ಎಂದರು.

ಇದನ್ನೂ ಓದಿ: ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ ಬಲ ಹೆಚ್ಚುತ್ತಿದೆಯಷ್ಟೇ: ನಿರ್ಮಲಾ ಸೀತಾರಾಮನ್

‘ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಮೋದಿಯವರ ಜನಾಶೀರ್ವಾದದ ಪ್ರಮಾಣ ಹೆಚ್ಚುತ್ತ ಸಾಗಿದೆ ಎಂದು ವಿವರಿಸಿದರು. ಅವರ ನಡವಳಿಕೆ, ವ್ಯಕ್ತಿತ್ವ, ದೇಶಪ್ರೇಮ ಮತ್ತು ಈ ಮೂರನ್ನು ಸೇರಿಸಿದ ಸೈದ್ಧಾಂತಿಕ ವ್ಯವಸ್ಥೆಗಳು ಇದಕ್ಕೆ ಕಾರಣ. ಪ್ರಕೋಷ್ಠಗಳ ಮೂಲಕ ರಾಜಕೀಯದಲ್ಲಿ ಪರಿವರ್ತನೆ ಸಾಧ್ಯ ವ್ಯಕ್ತಿಯ ಸಂಚ್ಚಾರಿತ್ರ್ಯ, ಮಾತೃಭೂಮಿಯ ಬಗೆಗಿನ ಅವರ ಪರಿಕಲ್ಪನೆ, ಸಮಾಜದ ಜೊತೆಗಿನ ಅವರ ಸಂಬಂಧಗಳ ಆಧಾರಿತ ಜೀವನಪದ್ಧತಿ ಭಾರತದ್ದಾಗಿತ್ತು. ಅದನ್ನು ಜಗತ್ತು ಒಪ್ಪಿಕೊಂಡಿತ್ತು ಎಂದು ವಿವರಿಸಿದರು.

ಪ್ರಕೋಷ್ಠಗಳು ವೃತ್ತಿ ಆಧರಿತ ಕಲ್ಪನೆಯಡಿ ಜೋಡಣೆಗೊಂಡಿವೆ. ಈ ದೇಶ ಇನ್ನಷ್ಟು ಯಶಸ್ವಿ ರಾಷ್ಟ್ರ ಆಗಲು ಜಾತಿಗಿಂತ ಮೀರಿ, ವೃತ್ತಿ ಆಧರಿತ ಮತ್ತು ನಮ್ಮ ಸಂಘಟನೆಗಳ ಪರಿಕಲ್ಪನೆಯ ರಾಜನೀತಿ ಈ ದೇಶದಲ್ಲಿ ಬರಬೇಕು. ಜಾತಿಗಿಂತ ನೀತಿ ಮೇಲು ಎಂಬ ಚಿಂತನೆ ಅನುಷ್ಠಾನಕ್ಕೆ ಬರಲಿ. ವಕೀಲ, ವೈದ್ಯರ ಸಾಧನೆ ಗಮನಿಸಿ ಅವರ ಬಳಿ ತೆರಳುತ್ತಾರೆ. ಆದರೆ, ರಾಜಕಾರಣದಲ್ಲಿ ಮಾತ್ರ ಜಾತಿಯನ್ನೆ ನೆಚ್ಚಿಕೊಳ್ಳುತ್ತಾರೆ. ಜಾತಿಗೆ ಒತ್ತು ಕೊಟ್ಟು ರಾಜಕಾರಣ ಮಾಡುವುದು ದುರ್ದೈವ. ಇದರಿಂದ ಹೊರಬರುವಂತಾಗಲಿ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News