ಯಕ್ಷಗಾನ ಕಲಾರಂಗ ನಿರ್ಮಿಸಿದ 34ನೇ ಮನೆ ಉದ್ಘಾಟನೆ
ಉಡುಪಿ : ಹೆಗ್ಗುಂಜೆ ಗ್ರಾಮದ ಯಕ್ಷಗಾನ ಮದ್ದಲೆ ವಾದಕ ನೀರ್ಜೆಡ್ಡು ವಿಜಯ ನಾಯ್ಕ್(ಮಡಾಮಕ್ಕಿ ಮೇಳ) ಇವರಿಗೆ ಮಣಿಪಾಲದ ಡಾ.ಸತೀಶ್ ಕಾಮತ್ ಮತ್ತು ಶೀಲಾ ಕಾಮತ್ ಕುಟುಂಬಿಕರು, ಉಡುಪಿಯ ಗುರುಸ್ಮೃತಿ ಟ್ರಸ್ಟ್ ಹಾಗೂ ಗೋಕುಲ ಕಾಮತ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿ ಕೊಟ್ಟ ನೂತನ ಮನೆ ‘ಕುಸುಮ್ ವಿಹಾರ್’ನ್ನು ಕಾಸರಗೋಡಿನ ನಿವೃತ್ತ ಮುಖ್ಯ ಶಿಕ್ಷಕ ಎನ್.ರಾಮದಾಸ್ ಕಾಮತ್ ಶನಿವಾರ ಉದ್ಘಾಟಿಸಿದರು.
ಗುರುಸ್ಮತಿ ಟ್ರಸ್ಟ್ ವರಿಷ್ಠ ಡಾ.ದೀಪಕ್ ಪ್ರಭು, ಅಜಿತ್ ಕಾಮತ್, ಡಾ.ನಮಿತ ಪ್ರಭು, ಶೇಡಿಕೋಡ್ಲು ವಿಠಲ ಶೆಟ್ಟಿ, ಬಿ.ಸೀತಾರಾಮ ಶೆಟ್ಟಿ, ಗ್ರಾಪಂ ಸದಸ್ಯ ಸುಕುಮಾರ ಶೆಟ್ಟಿ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್.ವಿ. ಭಟ್, ವಿ.ಜಿ.ಶೆಟ್ಟಿ, ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ್ ಹೆಗ್ಡೆ, ಬಿ.ಸಂತೋಷ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಮುದ್ರಾಡಿ, ಎಸ್.ಗಣರಾಜ ಭಟ್, ಎಚ್.ಎನ್.ಶೃಂಗೇಶ್ವರ, ಎ.ನಟರಾಜ ಉಪಾಧ್ಯ, ಅನಂತರಾಜ ಉಪಾಧ್ಯ, ಅಶೋಕ್ ಎಂ., ರಾಜೀವಿ, ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.
ಮಡಾಮಕ್ಕಿ ಮೇಳದ ಭಾಗವತ ಬಸವರಾಜರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಸಂಸ್ಥೆ ದಾನಿಗಳ ನೆರವಿನಿಂದ ಈವರೆಗೆ ನಿರ್ಮಿಸಿಕೊಟ್ಟ 34ನೇಯ ಮನೆ ಯಾಗಿದ್ದು, ಕಲಾವಿದರಿಗೆ ನಿರ್ಮಿಸಿದ 6ನೇಯ ಮನೆಯಾಗಿದೆ.