ಸಚಿವ ಸೋಮಣ್ಣ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲ: ಸಚಿವ ಆರ್.ಅಶೋಕ್

Update: 2022-10-24 12:33 GMT
ಸಚಿವ ಆರ್.ಅಶೋಕ್ 

ಬೆಂಗಳೂರು, ಅ. 24: ‘ವಸತಿ ಸಚಿವ ವಿ.ಸೋಮಣ್ಣ (V. Somanna ಅವರು ಮನವಿ ಸಲ್ಲಿಸಲು ಆಗಮಿಸಿದ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಅವರೇನು ಉದ್ದೇಶಪೂರ್ವಕವಾಗಿ ಆಕೆಯ ಮೇಲೆ ಹಲ್ಲೆ ನಡೆಸಿಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ (R. Ashoka) ಅವರು ಸಮರ್ಥನೆ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಖುದ್ದು ಸಚಿವ ಸೋಮಣ್ಣ ಅವರೇ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೋರಿದ್ದಾರೆ. ಅಲ್ಲದೆ, ಮಹಿಳೆಯೂ ಸಚಿವರು ತನ್ನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ದೂರನ್ನು ನೀಡಿಲ್ಲ. ಹೀಗಾಗಿ ಈ ಘಟನೆಯನ್ನು ಅಲ್ಲಿಗೆ ಕೈಬಿಡಬೇಕು' ಎಂದು ಹೇಳಿದರು.

ಇದನ್ನೂ ಓದಿ: ಸಮಸ್ಯೆ ಹೇಳಲು ಬಂದ ಮಹಿಳೆಗೆ ಕಪಾಳಮೋಕ್ಷ: ಕ್ಷಮೆಯಾಚಿಸಿದ ಸಚಿವ ಸೋಮಣ್ಣ

‘ಸಚಿವ ಸೋಮಣ್ಣ ಅವರು ಮನೆ ಕೊಟ್ಟಿದ್ದಾರೆಂದು ಮಹಿಳೆ ಹೇಳಿದ್ದಾರೆ. ನಾವು ಸಮಾಜದ ಹಾಗೂ ಮಹಿಳೆಯರ ಪರವಾಗಿದ್ದೇವೆ. ಕೆಲ ಸಂದರ್ಭಗಳಲ್ಲಿ ಇಂತಹ ಘಟನೆಗಳು ಆಗುತ್ತವೆ. ಹೀಗಾಗಿ ಈ ಘಟನೆಯನ್ನು ಇಲ್ಲಿಗೆ ಬಿಟ್ಟು ಬಿಡಬೇಕು' ಎಂದು ಆರ್.ಅಶೋಕ್, ಸಚಿವ ಸೋಮಣ್ಣನವರ ಬೆಂಬಲಕ್ಕೆ ನಿಂತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News