×
Ad

ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ

Update: 2022-10-24 21:46 IST
ಮೂರನೇ ಚಾರ್ಲ್ಸ್ ಜೊತೆ ಕ್ಯಾಮಿಲ್ಲಾ-  (Photo- PTIo)

ಬೆಂಗಳೂರು, ಅ.24: ಪೃಕೃತಿ ಚಿಕಿತ್ಸೆ ಪಡೆಯಲು ಇಂಗ್ಲೆಂಡ್ ರಾಣಿ(ಕ್ವೀನ್ ಕಾನ್ಸಾರ್ಟ್) ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.

ರವಿವಾರ ಸಂಜೆ ಅವರು ತಮ್ಮ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳ ತಂಡದೊಂದಿಗೆ ಬ್ರಿಟಿಷ್ ಏರ್‍ವೇಸ್ ವಿಮಾನದಲ್ಲಿ ಬೆಂಗಳೂರು ಅಂತರರಾಷ್ಟ್ರ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾರಿನಲ್ಲಿ ವೈಟ್‍ಫಿಲ್ಡ್‍ನಲ್ಲಿರುವ ಪೃಕೃತಿ ಚಿಕಿತ್ಸಾ ಕೇಂದ್ರಕ್ಕೆ ತಲುಪಿದ್ದಾರೆ.

ಇದೊಂದು ಖಾಸಗಿ ಭೇಟಿಯಾಗಿದ್ದು, ರಾಣಿ ಕ್ಯಾಮಿಲ್ಲಾ ಅವರು  10 ದಿನದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗುವುದಿಲ್ಲ ಮತ್ತು ಯಾರ ಭೇಟಿಗೂ ಅವಕಾಶವಿರುವುದಿಲ್ಲ ಎಂದು ತಿಳಿದು ಬಂದಿದೆ. ಪುನಃಶ್ಚೇತನ (ವೆಲ್‍ನೆಸ್) ಚಿಕಿತ್ಸೆಯನ್ನು ಪಡೆಯಲು ಅವರು ಬೆಂಗಳೂರಿಗೆ ಬಂದಿದ್ದಾರೆ.

ರಾಣಿ 2ನೆ ಎಲಿಜಬೆತ್ ಅವರು ಇತ್ತೀಚಿಗೆ ನಿಧನರಾದ ತರುವಾಯ ಅವರ ಮಗ ಮೂರನೇ ಚಾರ್ಲ್ಸ್ ಅವರು ಇಂಗ್ಲೆಂಡ್‍ನ ಪ್ರಸ್ತುತ ರಾಜನಾಗಿದ್ದಾರೆ. ಚಾರ್ಲ್ಸ್ ಅವರ ಪತ್ನಿಯೇ ಕ್ಯಾಮಿಲ್ಲಾ. ಕ್ಯಾಮಿಲ್ಲಾ ಅವರು ರಾಣಿಯಾದ ನಂತರ ಬೆಂಗಳೂರಿಗೆ ಆಗಮಿಸಿರುವುದು ಅವರ ಮೊದಲ ವಿದೇಶ ಪ್ರವಾಸವಾಗಿದೆ. ಈ ಮೊದಲು ಒಟ್ಟು ಅವರು ಆರು ಬಾರಿ ಬೆಂಗಳೂರಿಗೆ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News