ಪತ್ರಕರ್ತರಿಗೆ ನಗದು ಗಿಫ್ಟ್ ಆರೋಪ: ನನ್ನ ಹತ್ತಿರ ಸಾಕ್ಷಿ, ಆಧಾರಗಳಿಲ್ಲ ಎಂದ ಸಚಿವ ಆರಗ ಜ್ಞಾನೇಂದ್ರ

Update: 2022-10-29 15:08 GMT

ಬೆಂಗಳೂರು, ಅ.29: ದೀಪಾವಳಿ ಹಬ್ಬಕ್ಕೆ ಮುಖ್ಯಮಂತ್ರಿ ಕಚೇರಿಯಿಂದ ಕೆಲ ಪತ್ರಕರ್ತರಿಗೆ ನಗದು ಗಿಫ್ಟ್ ನೀಡಿರುವ ಕುರಿತು ನನ್ನ ಹತ್ತಿರ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರ್ತಕರ್ತರಿಗೆ ಹಣ ನೀಡಿದ ಪ್ರಕರಣದ ಬಗ್ಗೆ ನಾವು ಮೂಗು ತೂರಿಸುವ ಕೆಲಸ ಮಾಡುವುದಿಲ್ಲ ಎಂದು ನುಡಿದರು.

ನಗದು ಗಿಫ್ಟ್ ನೀಡಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಯಾರು ಏನು ಆರೋಪ ಮಾಡಿದ್ದಾರೋ ಅವರಿಗೆ ಕೇಳಬೇಕು. ಅವರ ಬಳಿಯೇ ಕೇಳಬೇಕು, ನನ್ನ ಹತ್ತಿರ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು ತಿಳಿಸಿದರು.

Similar News