ಕಾನೂನು ಆಯೋಗದ ಅಧ್ಯಕ್ಷರಾಗಿ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇಮಕ

Update: 2022-11-08 04:21 GMT

ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ (Ritu Raj Awasthi) ಅವರನ್ನು ಭಾರತದ 22ನೇ ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಇವರ ಜತೆಗೆ ಆಯೋಗದ ಸದಸ್ಯರಾಗಿ ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಟಿ.ಶಂಕರನ್, ಪ್ರೊ.ಆನಂದ್ ಪಾಲಿವಾಲ್, ಪ್ರೊ.ಡಿ.ಪಿ.ವರ್ಮಾ, ಡಾ.ರಕಾ ಆರ್ಯ ಮತ್ತು ಶ್ರೀ ಎಂ.ಕರುಣಾನಿಧಿ ಅವರನ್ನು ನೇಮಕ ಮಾಡಲಾಗಿದೆ.

ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದರು ಹಾಗೂ 2022ರ ಜುಲೈ 3ರಂದು ಕನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು. ಇವರು ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಸರ್ಕಾರಿ ಕ್ರಮವನ್ನು ಎತ್ತಿಹಿಡಿದ ಹೈಕೋರ್ಟ್‍ನ ಪೂರ್ಣಪೀಠದ ಅಧ್ಯಕ್ಷರಾಗಿದ್ದರು.

ಭಾರತದ 21ನೇ ಕಾನೂನು ಅಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ಅವರ ನಿವೃತ್ತಿಯ ಬಳಿಕ 2018ರ ಆಗಸ್ಟ್ 31ರಿಂದ ಖಾಲಿ ಉಳಿದಿತ್ತು.

ಕಾನೂನು ಆಯೋಗ ರಚನೆಯಲ್ಲಿನ ವಿಳಂಬವನ್ನು ವಿರೋಧಿಸಿ ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ livelaw.in ವರದಿ ಮಾಡಿದೆ.

Similar News