ಉತ್ತರಪ್ರದೇಶ: ತ್ಯಾಜ್ಯ ಸಂಗ್ರಹ ಟ್ಯಾಂಕ್ ಸ್ವಚ್ಛತೆ ವೇಳೆ ಮೂವರು ಕಾರ್ಮಿಕರ ಮೃತ್ಯು

Update: 2022-11-11 13:58 GMT

ಕಾನ್ಪುರ (ಉ.ಪ್ರ),ನ.11: ನಗರದ ಚರ್ಮ ಹದಗೊಳಿಸುವ ಕೈಗಾರಿಕೆ (ಟ್ಯಾನರಿ)ಯೊಂದರ ತ್ಯಾಜ್ಯ ಸಂಗ್ರಹ ಟ್ಯಾಂಕ್ ನ್ನು ಸ್ವಚ್ಛಗೊಳಿಸುತ್ತಿದ್ದ ಮೂವರು ಕಾರ್ಮಿಕರು ವಿಷಾನಿಲ ಸೇವನೆ(Ingestion of poisonous gas)ಯಿಂದ ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಈ ದುರಂತ ಸಂಭವಿಸಿದ್ದು,ಮೃತರನ್ನು ಸುಖಬೀರ್ ಸಿಂಗ್(Sukhbir Singh) (35),ಸೋನು ಬಾಲ್ಮೀಕಿ (Sonu Balmiki)(28) ಮತ್ತು ಸತ್ಯಂ ಯಾದವ್(Satyam Yadav) (26) ಎಂದು ಗುರುತಿಸಲಾಗಿದೆಯೆಂದು ಪೊಲೀಸರು ತಿಳಿಸಿದರು.

ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ವಿಷಾನಿಲ ಸೇವಿಸಿ ಮೂವರೂ ಪ್ರಜ್ಞಾಹೀನರಾಗಿದ್ದರು.  ಟ್ಯಾನರಿಯ ಸಿಬ್ಬಂದಿಗಳು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು.

ಮೃತರ ಕುಟುಂಬದವರು ಲಿಖಿತ ದೂರನ್ನು ಸಲ್ಲಿಸಿದರೆ ಎಫ್ಐಆರ್ ದಾಖಲಿಸುವುದಾಗಿ ಪೊಲೀಸರು ತಿಳಿಸಿದರು.

Similar News