ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ 'ಟಿಪ್ಪು' ಪ್ರತಿಮೆ ಏಕೆ ಬೇಡ?: ಮಾಜಿ ಸಿಎಂ ವೀರಪ್ಪ ಮೊಯ್ಲಿ ಪ್ರಶ್ನೆ

Update: 2022-11-14 17:10 GMT

ಬೆಂಗಳೂರು, ನ. 14: ಟಿಪ್ಪು ಉತ್ತಮ ಆಡಳಿತಗಾರ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು. ಅವರ ಪ್ರತಿಮೆಯನ್ನು ಏಕೆ ಸ್ಥಾಪನೆ ಮಾಡಬಾರದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರಶ್ನಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಅವರ ಅಭಿಪ್ರಾಯ ವ್ಯಯುಕ್ತಿಕ. ಆದರೆ, ಟಿಪ್ಪು ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಟಿಪ್ಪು ಸುಲ್ತಾನ್ ಪ್ರತಿಮೆ ಏಕೆ ಮಾಡಬಾರದು ಎಂದು ತಿಳಿಸಿದರು.

''ಎಲ್ಲ ಸಾಹಿತಿಗಳು ಇತಿಹಾಸಕಾರಲ್ಲ. ನಮ್ಮ ಇತಿಹಾಸವನ್ನು ಬೈರಪ್ಪ ನೋಡಲಿ ಎಂದ ಅವರು, ಎಸ್.ಎಲ್.ಭೈರಪ್ಪ ಅವರು, ಕಾದಂಬರಿ ಬರೆದರೆ ಇತಿಹಾಸಕಾರ ಆಗಲ್ಲ. ಇತಿಹಾಸವನ್ನು ಅವರು ಓದಬೇಕು. ಅಲ್ಲದೆ, ಯುದ್ಧ ಮಾಡುವಾಗ ಕೆಲವರು ಸಾಯುತ್ತಾರೆ.ಅದಕ್ಕೆ ಚಕ್ರವರ್ತಿ ಕಾರಣ ಎಂದು ಆರೋಪ ಮಾಡುವುದು ಸರಿಯಲ್ಲ'' ಎಂದರು.

Similar News