ಬೆಂಗಳೂರು: ಡಿ.18ರಂದು 'ಕ್ರಿಸ್‌ಮಸ್ ನಮನ' ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಹ್ವಾನ

Update: 2022-11-15 11:36 GMT

ಬೆಂಗಳೂರು, ನ.೧೫: ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ನೇತೃತ್ವದ ನಿಯೋಗವು ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಡಿ.೧೮ರಂದು ನಡೆಯಲಿರುವ ‘ಕ್ರಿಸ್ಮಸ್ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿತು.

ಈ ಸಂದರ್ಭದಲ್ಲಿ ಆರ್ಚ್ ಬಿಷಪ್ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೆ.ಎ.ಕಾಂತರಾಜ್, ಸೆವೆಂತ್ ಡೇ ಅಡ್ವೆಂಟಿಸ್ಟ್ ಅಧ್ಯಕ್ಷ ಪಾಸ್ಟರ್ ಪೀಟರ್ ಹಳೇಮನೆ, ಫಾದರ್ ಗೇಬ್ರಿಯಲ್ ಲೋಬೊ, ಎಸ್.ಜಯನಾಥನ್ ಉಪಸ್ಥಿತರಿದ್ದರು.

Similar News