ಹಳೆಯಂಗಡಿ: ಮೀಮ್ ಅಲ್ ಮೀಲಾದ್ ಕಾನ್ಫರೆನ್ಸ್, ಸ್ಪರ್ಧಾ ಕಾರ್ಯಕ್ರಮ

Update: 2022-11-20 17:00 GMT

ಹಳೆಯಂಗಡಿ, ನ.20: ಶಂಸುಲ್ ಉಲಮಾ ಹಿಫ್ಳುಳ್ ಖುರ್ ಆನ್ ಕಾಲೇಜ್ ಹಾಗೂ ಅಬ್ದುಲ್ ಜಬ್ಬಾರ್ ಉಸ್ತಾದ್ ವಿಮೆನ್ಸ್ ಶರೀಅತ್ ಹಾಗೂ ಬೊಳ್ಳೂರು ಕಾಲೇಜು ಇದರ ವಿದ್ಯಾರ್ಥಿಗಳಿಗಾಗಿ "ಮೀಮ್ ಅಲ್ ಮೀಲಾದ್ ಕಾನ್ಫರೆನ್ಸ್" ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮವು ಶನಿವಾರ ಬೆಳಗ್ಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರಾದ ಶೈಖುನಾ ಬೊಳ್ಳೂರು ಉಸ್ತಾದ್ ದುಆದೊಂದಿಗೆ ಉದ್ಘಾಟಿಸಿದರು. ಬಳಿಕ ಶರೀಅತ್ ವಿದ್ಯಾರ್ಥಿನಿಯರು ಹಾಗೂ ಖುರ್ ಆನ್ ಹಾಫಿಳ್ ವಿದ್ಯಾರ್ಥಿಗಳ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಗಳ ಮುಖ್ಯಸ್ಥ ಬಿ.ಇ. ಮುಹಮ್ಮದ್ ವಹಿಸಿದ್ದರು. ಸಂಸ್ಥೆಯ ಕಾರ್ಯನಿರ್ವಾಹಕರಾಧ ಜಿ.ಎಮ್. ಹನೀಫ್‌ ದಾರಿಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೊಳ್ಳೂರು ಉಸ್ತಾದ್‌ ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ವಲಯಾಧ್ಯಕ್ಷ  ಶಂಸುದ್ದೀನ್‌, ಬೊಳ್ಳೂರು ಘಟಕದ ಕಾರ್ಯದರ್ಶಿ ಅಲ್ಪಾಝ್ ಇಂದಿರಾನಗರ, ಬೊಳ್ಳೂರು ಮಸೀದಿ ಉಪಾಧ್ಯಕ್ಷ ಟಿ.ಎಚ್.ಎ. ರಹ್ಮಾನ್, ಕಾರ್ಯದರ್ಶಿ ಬಿ.ಎಮ್. ಸುಲೈಮಾನ್, ಇಂದಿರನಗರ ಲಿಯಾವುಲ್ ಇಸ್ಲಾಮ್ ಧಪ್ ಸಮಿತಿ ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ಗ್ರಾಮ ಪಂಚಾಯತ್ ಸದಸ್ಯರಾದ ಎಮ್. ಅಬ್ದುಲ್ ಖಾದರ್, ಅಬ್ದುಲ್ ಅಝೀಝ್ ಬೊಳ್ಳೂರು, ನಾಸಿರ್ ಮುಸ್ಲಿಯಾರ್, ರಿಯಾಝ್ ಪೈಝಿ, ಅನ್ಸಾರ್ ಅಝ್ಹರಿ, ಅಬ್ದುಲ್ ರಝಾಕ್ ಮೂಡುತೋಟ ಸಾಗ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ತ್ವಯ್ಯಿಬ್ ಪೈಝಿ ಬೊಳ್ಳೂರು ಹಾಗೂ ಹಾಫಿಳ್ ತ್ವಲ್ ಹತ್ ಅವರು ಕಾರ್ಯಕ್ರಮ ನಿರೂಪಿಸಿದರು.

Similar News