ಕದ್ರಿ ವಿಷ್ಣು ಪ್ರಶಸ್ತಿಗೆ ಹರಿನಾರಾಯಣ ಎಡನೀರು ಆಯ್ಕೆ

Update: 2022-11-22 12:54 GMT

ಮಂಗಳೂರು : ತೆಂಕುತಿಟ್ಟಿನ ಬಣ್ಣದ ವೇಷಧಾರಿ ಹರಿನಾರಾಯಣ ಭಟ್ ಎಡನೀರು ಅವರಿಗೆ ಕದ್ರಿ ಯಕ್ಷ ಬಳಗದವರು ಕೊಡಮಾಡುವ 2022ನೇ ಸಾಲಿನ ಕದ್ರಿ ವಿಷ್ಣು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಸಂಘಟಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.

ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಕೋಳ್ಯೂರು ರಾಮಚಂದ್ರರಾಯರಿಂದ ನೃತ್ಯ ಕಲಿತು, ಕಟೀಲು ಮೇಳಕ್ಕೆ ಬಾಲ ಕಲಾವಿದನಾಗಿ ಸೇರಿ ಕೋಡಂಗಿ, ಬಾಲಗೋಪಾಲ ವೇಷಧಾರಿಯಾಗಿ ಹಂತಹಂತವಾಗಿ ಕಲಾಸಾಧನೆ ಮಾಡಿ ಬಣ್ಣದ ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿರುವ ಹರಿನಾರಾಯಣ ಸುಮಾರು 30 ವರ್ಷಗಳಿಂದ ಶ್ರೀ  ಕಟೀಲು ಮೇಳದಲ್ಲಿ ಕಲಾಸೇವೆ  ಮಾಡುತ್ತಿದ್ದಾರೆ.

ನ.25ರಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ನಡೆಯಲಿರುವ ಶ್ರೀ ಕಟೀಲು ಮೇಳದ ಸೇವೆಯಾಟದ ಸಂದರ್ಭ ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Similar News