ಶಾಲಾ ವಿದ್ಯಾರ್ಥಿಯ ಪುಸ್ತಕ ಬಿಡುಗಡೆ

Update: 2022-11-22 13:29 GMT

ಮಂಗಳೂರು, ನ.22: ನಗರದ ಬೆಂದೂರ್‌ವೆಲ್ ಸಂತ ತೆರೆಸಾ ಶಾಲೆಯ ೯ನೆ ತರಗತಿಯ ವಿದ್ಯಾರ್ಥಿ ಅದ್ವೈತ್ ಕೃಷ್ಣರಾಜ್ ಬರೆದ ಇಂಗ್ಲಿಷ್ ಸಣ್ಣ ಕಥೆಗಳ ಸಂಕಲನ "The First Flight-A Bunch of Adventures" ಬಿಡುಗಡೆ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.

ಮೇಯರ್ ಜಯಾನಂದ ಅಂಚನ್ ಪುಸ್ತಕ ಬಿಡುಗಡೆಗೊಳಿಸಿದರು. ಮಿಸ್ಟಿಕಲ್ ರೋಸ್ ಪ್ರೀ ಸ್ಕೂಲ್‌ನ ಪ್ರಾಂಶುಪಾಲೆ ಫನಿಟಾ ಜೆನಿಫರ್ ಪುಸ್ತಕ ಪರಿಚಯ ಮಾಡಿದರು. ದ.ಕ. ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಸಂತ ತೆರೆಸಾ ಶಾಲೆಯ ಸಂಚಾಲಕಿ ಸಿಸ್ಟರ್ ಶೈಲಾ ಬಿ.ಎಸ್, ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್ ಉಪಸ್ಥಿತರಿದ್ದರು. ಅನಘಾ ಪ್ರಾರ್ಥನ ಗೀತೆ ಹಾಡಿದರು. ಅಶ್ನಿ ಕಾರ್ಯಕ್ರಮ ನಿರೂಪಿಸಿದರು. 

Similar News