BMTC ಬಸ್ ಹರಿದು ವಿದ್ಯಾರ್ಥಿನಿ ಮೃತ್ಯು

Update: 2022-11-22 14:25 GMT

ಬೆಂಗಳೂರು(Bengaluru) , ನ.21: ಬಿಎಂಟಿಸಿ ಬಸ್ ಹರಿದು ಬಾಲಕಿ ಮೃತಪಟ್ಟಿರುವ ಘಟನೆ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ನಡೆದಿದೆ.

ಟಿಸಿಪಾಳ್ಯದ ಭಟ್ಟರಹಳ್ಳಿ ಮಾರ್ಗದಲ್ಲಿ ಬಿಎಂಟಿಸಿ ಬಸ್ ಹರಿದು 16 ವರ್ಷದ ಬಾಲಕಿ ಲಯಶ್ರೀ ಸಾವನ್ನಪ್ಪಿದ್ದು, ತಾಯಿ, ಮಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಯಿ ಪ್ರಿಯದರ್ಶಿನಿ ಜೊತೆಗೆ ತೆರಳುತ್ತಿದ್ದ ವೇಳೆ ಭಟ್ಟರಹಳ್ಳಿ ಸಿಗ್ನಲ್ ಬಳಿ ದ್ವಿಚಕ್ರವಾಹನ ನಿಯಂತ್ರಣ ಆಗಿ ಬಿದ್ದಿತ್ತು. ಎಡಗಡೆ ಬಿದ್ದ ಪ್ರಿಯದರ್ಶಿನಿ, ಮಗ ಯಶ್ವಿನ್ ಗಾಯಗೊಂಡಿದ್ದು, ಬಲಗಡೆ ಬಿದ್ದ ಲಯಶ್ರೀ ಮೇಲೆ ಬಿಎಂಟಿಸಿ ಬಸ್ ಹರಿದು ಮೃತಪಟ್ಟಿದ್ದಾರೆ. 
ಘಟನೆ ಸಂಬಂಧ ಕೆಆರ್‍ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News