ಯುವಕ ಆತ್ಮಹತ್ಯೆ
Update: 2022-11-22 15:47 GMT
ಬೈಂದೂರು: ಮದ್ಯಪಾನ ಮಾಡುವ ಚಟ ಹೊಂದಿದ್ದ ನಾಗೂರಿನ ಸಿಂಗೂರು ಬಡಾಮನೆ ನಿವಾಸಿ ನಾಗಪ್ಪ ಪೂಜಾರಿ ಎಂಬವರ ಮಗ ಸುನೀಲ್ (21) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನ.21ರಂದು ರಾತ್ರಿ ವೇಳೆ ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.