ಕಟಪಾಡಿ ರಮೇಶ್ ಕಾಮತ್
Update: 2022-11-28 19:39 IST
ಉಡುಪಿ: ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ, ಕಟಪಾಡಿ ದರ್ಶನಪಾತ್ರಿ ಕಾಮತ್ ಮನೆತನದ ದಿವಂಗತ ವಿಠ್ಠಲ್ ಪದ್ಮನಾಭ ಕಾಮತ್ ಇವರ ಹಿರಿಯ ಪುತ್ರ ಕಟಪಾಡಿ ರಮೇಶ್ ಕಾಮತ್ (69) ನ.25ರಂದು ಅಲ್ಪಕಾಲದ ಅಸೌಖ್ಯದಿಂದ ಉದ್ಯಾವರ ಗುಡ್ಡೆಯಂಗಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಇವರು ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ, ಮುಂಬೈ, ಪುಣೆ ಶಾಖೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಮೃತರು ಪತ್ನಿ, ತಾಯಿ, ಸಹೋದರ, ಸಹೋದರಿ ಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.