ಬೆಂಗಳೂರು; ಊಟ ಇಲ್ಲ ಎಂದಿದ್ದಕ್ಕೆ ರಾಜಕೀಯ ಮುಖಂಡನ ಪುತ್ರನಿಂದ ಹೊಟೇಲ್ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ; ಪ್ರಕರಣ ದಾಖಲು

Update: 2022-11-30 13:21 GMT

ಬೆಂಗಳೂರು, ನ.30: ಕ್ಷಲ್ಲಕ ಕಾರಣಕ್ಕೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ರೆಸ್ಟೋರೆಂಟ್ ಒಂದರ ಸಿಬ್ಬಂದಿ ಮೇಲೆ ರಾಜಕೀಯ ನಾಯಕನ ಪುತ್ರ ಸೇರಿದಂತೆ ಹಲವರು ಹಲ್ಲೆ  ನಡೆಸಿರುವ ಘಟನೆ ವರದಿಯಾಗಿದೆ.

ಹೊಟೇಲ್ ಸಿಬ್ಬಂದಿ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 15 ರಿಂದ 20 ಮಂದಿ ಅಪರಿಚಿತರಿಂದ ಗೂಂಡಾಗಿರಿ ಮಾಡಿರುವ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ನೀಲಾದ್ರಿ ನಗರದ ಬಳಿಯಿರುವ ವಿಲೇಜ್ ರೆಸ್ಟೋರೆಂಟ್‍ನಲ್ಲಿ ನ.20ರ ರಾತ್ರಿ ಈ ಕೃತ್ಯವೆಸಗಿದ್ದಾರೆ. ಹೆಚ್ಚುವರಿ ಮಂದಿಗೆ ಊಟ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದು  ಸಿಬ್ಬಂದಿ ಹೇಳಿದ ವಿಚಾರಕ್ಕೆ ಗೂಂಡಾಗಿರಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Similar News