ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಸಿಬ್ಬಂದಿ
Update: 2022-12-02 14:46 GMT
ಬೆಂಗಳೂರು, ಡಿ.2: ರಾಮನಗರ ಜಿಲ್ಲೆಯ ಕಂಬಳಗೋಡಿನ ಬೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಮಲ್ಲೇಶ್ ಹಾಗೂ ಲೈನ್ ಮ್ಯಾನ್ ಬಸವರಾಜು ಅವರನ್ನು ಲೋಕಾಯುಕ್ತ ಪೋಲೀಸರು ಬಂಧಿಸಿದ್ದಾರೆ.
ಹನುಮಂತಯ್ಯ ಅವರ ಸ್ವತ್ತಿಗೆ ಸಂಬಂಧಿಸಿದಂತೆ ವಿದ್ಯುಚ್ಛಕ್ತಿ ಬಿಲ್ಲಿನ ದಂಡವಾದ 2.80 ಲಕ್ಷ ರೂ. ಹಣವನ್ನು ಮನ್ನಾ ಮಾಡಲು 1.50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ದೂರನ್ನು ಪರಿಗಣಿಸಿದ ಲೋಕಾಯುಕ್ತ ಪೋಲಿಸರು, ಲಂಚವನ್ನು ಸ್ವೀಕರಿಸುತ್ತಿದ್ದಾಗ ಎಂಜಿನಿಯರ್ ಮಲ್ಲೇಶ್ ಹಾಗೂ ಲೈನ್ಮ್ಯಾನ್ ಬಸವರಾಜು ಅವರನ್ನು ಬಂಧಿಸಿದ್ದಾರೆ.