ಪಚ್ಚನಾಡಿ: ಏಣಿಯಿಂದ ಬಿದ್ದು ಕಾರ್ಮಿಕ ಮೃತ್ಯು

Update: 2022-12-03 16:01 GMT

ಮಂಗಳೂರು: ಮನೆಯೊಂದರ ಮೆಟ್ಟಿಲು ನಿರ್ಮಾಣ ಕಾಮಗಾರಿ ವೇಳೆ ಏಣಿಯಿಂದ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಪಚ್ಚನಾಡಿಯ ಸಂತೋಷನಗರದಲ್ಲಿ ನಡೆದಿದೆ.

ಅಸ್ಸಾಂ ಮೂಲದ ಜಾಬೇದ್ ಅಹ್ಮದ್ (23) ಮೃತಪಟ್ಟ ಕಾರ್ಮಿಕ. ಇವರು ಮನೆಯೊಂದರ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ವೇಳೆ ಏಣಿಯಲ್ಲಿ ರೂಪಿಂಗ್‌ನ ಮೇಲೆ ಹೋಗುವಾಗ ಆಯತಪ್ಪಿ ಸುಮಾರು 12 ಅಡಿಯಿಂದ ಬಿದ್ದರು ಎನ್ನಲಾಗಿದೆ. ಈ ಸಂದರ್ಭ ನೆಲದಲ್ಲಿದ್ದ ಕಲ್ಲಿಗೆ ತಲೆ ಬಡಿದು ಗಂಭೀರವಾಗಿ ಗಾಯಗೊಂಡ ಜಾಬೇದ್ ಅಹ್ಮದ್‌ರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಸುರಕ್ಷಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸುತ್ತಿದ್ದ ಕಟ್ಟಡದ ಮಾಲಕ ಮತ್ತು ಗುತ್ತಿಗೆದಾರರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News