ಕನ್ನಡದ ಹಿರಿಯ ನಟ, ‘KGF’ ಖ್ಯಾತಿಯ ತಾತ ಕೃಷ್ಣ ಜಿ. ರಾವ್‌ ನಿಧನ

Update: 2022-12-07 11:36 GMT

ಬೆಂಗಳೂರು, ಡಿ. 7: ‘ಕೆಜಿಎಫ್​’ (KGF) ಸಿನೆಮಾದ ತಾತ ಎಂದೇ ಖ್ಯಾತಿ ಗಳಿಸಿದ್ದ ಕೃಷ್ಣ ಜಿ. ರಾವ್ ಅವರು ಇಂದು ( ಡಿ. 7) ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯ ಉಂಟಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆ ಯುಸಿರೆಳೆದಿದ್ದಾರೆ.

ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ಬೆಂಗಳೂರಿನ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯದ ಬಗ್ಗೆ ಸೋದರ ಸಂಬಂಧಿ ನಂದಕುಮಾರ್ ಅವರು ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು.

Similar News