ಚಿಲುಮೆ ಸಂಸ್ಥೆ ಹಗರಣ: ಅಧಿಕಾರಿಗಳಿಬ್ಬರು ವಿಚಾರಣೆಗೆ ಗೈರು
Update: 2022-12-07 15:52 GMT
ಬೆಂಗಳೂರು, ಡಿ.7: ಮತದಾರರ ಮಾಹಿತಿ ಕದ್ದ ಚಿಲುಮೆ ಪ್ರಕರಣ ಸಂಬಂಧ ಐಎಎಸ್ ಅಧಿಕಾರಿಗಳಾದ ಕೆ.ಶ್ರೀನಿವಾಸ್ ಹಾಗೂ ಎಸ್.ರಂಗಪ್ಪ ಅವರು ವಿಚಾರಣೆಗೆ ಗೈರಾದರು ಎಂದು ತಿಳಿದುಬಂದಿದೆ.
ಹಲಸೂರು ಗೇಟ್ ಠಾಣೆ ಪೊಲೀಸರು, ಇಬ್ಬರೂ ಅಧಿಕಾರಿಗಳನ್ನು ಡಿ. 3 ರಂದು ಒಂದು ಸುತ್ತಿನ ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದ ಅಧಿಕಾರಿಗಳು, ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ಕಾಲಾವಕಾಶ ಕೋರಿದ್ದರು.
ಅಧಿಕಾರಿಗಳಿಗೆ ಕಾಲಾವಕಾಶ ನೀಡಿದ್ದ ಪೊಲೀಸರು, ಬುಧವಾರ ವಿಚಾರಣೆಗೆ ಬರಬೇಕೆಂದು ಹೇಳಿ ಎರಡನೇ ನೋಟಿಸ್ ಕೊಟ್ಟು ಕಳುಹಿಸಿದ್ದರು.ಆದರೆ, ಇಬ್ಬರು ಅಧಿಕಾರಿಗಳು ಗೈರಾದರು.ಆದರೆ, ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.