ಬೆಂಗಳೂರು: ಸುಲಿಗೆ ಪ್ರಕರಣದ ಆರೋಪಿಗೆ ಕೈಕೋಳ ತೊಡಿಸಿ ಮೆರವಣಿಗೆ ನಡೆಸಿದ ಪೊಲೀಸರು

Update: 2022-12-09 15:08 GMT

ಬೆಂಗಳೂರು: ಅಮಾಯಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಗೆ ಪೊಲೀಸರು ಕೈಕೋಳ ತೊಡಿಸಿ, ಮೆರವಣಿಗೆ ಮಾಡಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಕೊಲೆ ಯತ್ನ, ಬೆದರಿಕೆ, ಸುಲಿಗೆ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಸುಹೇಲ್‍ನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿ, ಆತನ ಕೈಗೆ ಬೇಡಿ ಹಾಕಿ, ಇಡೀ ಪ್ರದೇಶದಲ್ಲಿ ಮೆರವಣಿಗೆ ಮಾಡಿದ್ದಾರೆ. 

ಆರೋಪಿಗೆ ಬುದ್ಧಿ ಬರಬೇಕು ಹಾಗೂ ಸ್ಥಳೀಯರಿಗೆ ಇಂತಹ ರೌಡಿಗಳ ಬಗ್ಗೆ ಧೈರ್ಯ ಬರಬೇಕು ಎಂಬ ಕಾರಣಕ್ಕೆ ಪೊಲೀಸರು ಆತನ ಮೆರವಣಿಗೆ ನಡೆಸಿದ್ದಾರೆನ್ನಲಾಗಿದೆ. ಆರೋಪಿ ಸುಹೇಲ್, ಡ್ರಗ್ಸ್ ಕೇಸ್‍ನಲ್ಲೂ ಸಿಕ್ಕಿ ಬಿದ್ದಿದ್ದಾನೆ.

Similar News