ಅಬ್ದುಲ್ ಖಾದರ್ ಮಂಚಿಲ ನಿಧನ

Update: 2022-12-13 12:13 GMT

ಮಂಗಳೂರು : ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಶಾಖೆಯ ಹಿರಿಯ ಸದಸ್ಯರಾದ ಜI ಅಬ್ದುಲ್ ಖಾದರ್ ಮಂಚಿಲರವರು ಇಂದು ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

86 ವರ್ಷ ಪ್ರಾಯದ ಅವರು ಉಳ್ಳಾಲದಲ್ಲಿ ಇಸ್ಲಾಮೀ ಆಂದೋಲನದ ಚಟುವಟಿಕೆಗಳಿಗೆ ನಾಂದಿ ಹಾಕಿದವರು. ಸೌಮ್ಯ ಸ್ವಭಾವದ ಸದಾ ಹಸನ್ಮುಖಿ ವ್ಯಕ್ತಿತ್ವದ ಅವರು ಜನಾನುರಾಗಿಯಾಗಿದ್ದರು.

ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸಂತಾಪ

ಜಮಾಅತ್ ಹಿರಿಯ ಸದಸ್ಯರಾದ ಅಬ್ದುಲ್ ಖಾದರ್ ಮಂಚಿಲರವರ ನಿಧನಕ್ಕೆ ರಾಜ್ಯ ಕಾರ್ಯದರ್ಶಿ ಜI ಮುಹಮ್ಮದ್ ಕುಂಞಿ, ಹಿರಿಯರಾದ ಜI ಕೆ.ಎಂ.ಶರೀಫ್, ಮಂಗಳೂರು ವಲಯ ಸಂಚಾಲಕರು, ಜಿಲ್ಲಾ ಸಂಚಾಲಕರಾದ ಜI ಅಮೀನ್ ಅಹ್ಸನ್, ವಲಯ ಕಾರ್ಯದರ್ಶಿ ಜI ಇಲ್ಯಾಸ್ ಇಸ್ಮಾಯಿಲ್, ಮಂಗಳೂರು ಸ್ಥಾನೀಯ ಅಧ್ಯಕ್ಷರಾದ ಜI ಕೆ.ಎಂ.ಅಶ್ರಫ್, ಉಳ್ಳಾಲ ಸ್ಥಾನೀಯ ಅಧ್ಯಕ್ಷರಾದ ಜI ಅಬ್ದುಲ್ ಕರೀಮ್, ಜಿಲ್ಲಾ ಹೊಣೆಗಾರರಾದ ಜI ಸಈದ್ ಇಸ್ಮಾಯೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

Similar News