ಬೆಂಗಳೂರು; ATM ಯಂತ್ರವನ್ನೇ ಹೊತ್ತುಯ್ದ ದುಷ್ಕರ್ಮಿಗಳು

Update: 2022-12-13 12:24 GMT

ಬೆಂಗಳೂರು, ಡಿ. 13: ಎಟಿಎಂ (automated teller machine) ಕೇಂದ್ರಕ್ಕೆ ನುಗ್ಗಿರುವ ದುಷ್ಕರ್ಮಿಗಳು ಎಟಿಎಂ ಯಂತ್ರವನ್ನೇ ಕಿತ್ತುಕೊಂಡು ಕಂಟೇನರ್ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿರುವ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.10ರಂದು ಹರಳೂರು ರಸ್ತೆಯ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಕೇಂದ್ರಕ್ಕೆ ನುಗ್ಗಿರುವ ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಕಿತ್ತು ಕಂಟೇನರ್‍ನಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. 

ಯಂತ್ರ ಕಳವು ನಡೆದಿರುವುದು ಮರುದಿನ ಬೆಳಿಗ್ಗೆ ಕಂಡು ಬಂದಿದ್ದು ಬ್ಯಾಂಕ್ ನ ಅಧಿಕಾರಿಗಳು ಕೇಂದ್ರಕ್ಕೆ ಧಾವಿಸಿ ಬೆಳ್ಳಂದೂರು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧಕಾರ್ಯ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

Similar News