ಬೆಂಗಳೂರು ಪ್ರೆಸ್ಕ್ಲಬ್ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ಬೆಂಗಳೂರು, ಡಿ.20: ಬೆಂಗಳೂರು ಪ್ರೆಸ್ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, 2022ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಆಯ್ಕೆ ಮಾಡಲಾಗಿದೆ.
ಈ ವರ್ಷದಲ್ಲಿ ಒಟ್ಟು 36 ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ವಿಶೇಷ ಪ್ರಶಸ್ತಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭಾಜನರಾಗಿದ್ದಾರೆ.
ಇನ್ನು ಪ್ರೆಸ್ ಕ್ಲಬ್ ವಾರ್ಷಿಕ ವಿಶೇಷ ಪುರಸ್ಕೃತರಾಗಿ ಬಸವರಾಜು, ಹನುಮೇಶ್ ಯಾವಗಲ್, ಹೆಚ್.ಎಸ್.ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ ಮೊದಲಿಯಾರ್, ಚೆನ್ನನಾಗರಾಜ್ ಎಂ., ಶ್ರೀಧರ ಬಿ.ಎನ್, ವಿನಯ್.ಎಂ, ಗೌತಮ್ ಮಾಚಯ್ಯ ಎಂ, ರಾಜಶೇಖರ್, ಎಸ್.ಹೆಚ್. ಮೂರ್ತಿ, ಸಂಗಮ್ ದೇವ್ ಐ.ಹೆಚ್, ಮುನೀರ್ ಅಹಮದ್ ಅಬದ್, ಕೆ.ವಿ. ಪರಮೇಶ್ , ಸಿ.ಎಸ್. ಬೋಪಯ್ಯ, ಶ್ಯಾಂ ಬೋಜಕ್, ಭಾಗ್ಯ ಪ್ರಕಾಶ್ .ಕೆ, ಅನಿಲ್ ವಿ. ಗೆಜ್ಜೆ, ಗಾಯತ್ರಿ ನಿವಾಸ್, ಶಿವಣ್ಣ, ಶೋಭಾ ಎಂ.ಸಿ, ದಿವಾಕರ್ .ಸಿ, ನಾಗಭೂಷಣ್ ಮೈ.ಎಂ, ವಿಲಾಸ್ ನಂದೂಡಕರ್, ಇ ನಾಗರಾಜು, ಪಿ. ರಾಜೇಂದ್ರ, ಶಿವಾನಂದ ತಗಡೂರು ಟಿ.ವಿ., ಶಿವಪ್ರಕಾಶ್.ಎಸ್, ಓಂಕಾರ ಕಾಕಡೆ, ಜಯ ಪ್ರಕಾಶ್ ಆರ್., ನರಸಿಂಹ ರಾವ್, ರಾಘವೇಂದ್ರ ಕೆ. (ತೋಗರ್ಸಿ), ಗಿರಿಪ್ರಕಾಶ್ ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 31ರಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.