ಕಾರಿನ ಗಾಜು ಒಡೆದು ಸಾವಿರಾರು ರೂ. ನಗದು ಕಳವು: ಜನನಿಬಿಡ ಸ್ಥಳದಲ್ಲೇ ಕರಾಮತ್ತು ತೋರಿದ ಕಳ್ಳರು

Update: 2022-12-22 17:47 GMT

ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಸಾವಿರಾರು ರೂ. ನಗದು ಕಳವುಗೈದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ರಾಧ ಮೆಡಿಕಲ್ಸ್ ನ ಮುಂಭಾಗದಲ್ಲಿ ಗುರುವಾರ ರಾತ್ರಿ ನಡೆದಿದೆ.

ಸದಾ ಜನಜಂಗುಳಿಯಿಂದ ಕೂಡಿರುವ ಸ್ಥಳದಲ್ಲೇ ಕಳ್ಳರು ಕರಾಮತ್ತು ತೋರಿರುವುದು ಎಲ್ಲರಿಗೂ ಅಚ್ಚರಿ‌ ತಂದಿದೆ. ನಿಲ್ಲಿಸಿದ್ದ ಕಾರಿನ ಮುಂಭಾಗ, ಚಾಲಕನ ಸೀಟಿನ ಬದಿಯ ಗಾಜನ್ನು ಒಡೆದು ಸುಮಾರು 40 ಸಾವಿರ ರೂ. ಕಳ್ಳರು ದೋಚಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ನಗರ ಠಾಣೆಯ ಪೊಲೀಸರು‌ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Similar News