×
Ad

ಮಂಗಳೂರು: ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

Update: 2022-12-28 16:40 IST

ಮಂಗಳೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮವು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆಯಿತು.

ಧ್ವಜಾರೋಹಣಾ ನೆರವೇರಿಸಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ ‘ನಮ್ಮ ನಾಯಕರು ಮಾತೃಭೂಮಿಯ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಹಾಗೂ ದೇಶವನ್ನು ಪರಕೀಯರ ದಬ್ಬಾಳಿಕೆಯಿಂದ ಭಾರತೀಯರಿಗೆ ಸ್ವಾತಂತ್ರಗಳಿಸಿಕೊಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ರಚಿಸಿದರು. ಬ್ರಿಟಿಷರಿಂದ ದೇಶವನ್ನು ಮುಕ್ತ ಮಾಡಲು ಅನೇಕ ಕಾಂಗ್ರೆಸ್ ನಾಯಕರು ತಮ್ಮ ಜೀವವನ್ನೇ ಬಲಿದಾನ ಮಾಡಿದ್ದಾರೆ ಎಂದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವ, ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ,  ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಶಾಲೆಟ್ ಪಿಂಟೊ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಲಾರೆನ್ಸ್ ಡಿಸೋಜ, ಅಬ್ಬಾಸ್ ಅಲಿ, ಅಬ್ದುರ‌್ರವೂಫ್, ಬಿ.ವಿಶ್ವನಾಥ್, ನೀರಜ್ ಚಂದ್ರಪಾಲ್, ಶಬ್ಬೀರ್ ಎಸ್, ನಝೀರ್ ಬಜಾಲ್, ಟಿ.ಕೆ.ಸುಧೀರ್, ಲಿಯಾಕತ್ ಶಾ, ಯೋಗಿಶ್ ನಾಯಕ್, ಸಂಶುದ್ದೀನ್ ಬಂದರ್, ಟಿ.ಹೊನ್ನಯ್ಯ, ಲಕ್ಷ್ಮಿ ನಾಯರ್, ಇಮ್ರಾನ್ ಎ.ಆರ್, ರಮಾನಂದ ಪೂಜಾರಿ, ಎಸ್.ಕೆ ಸೌಹಾನ್, ಶಶಿಕಲಾ ಪದ್ಮನಾಭ, ಧರ್ಮ, ಭೀಮ ಶಂಕರ್, ಜೋಸೆಫ್, ಝುಬೈರ್, ಜೋಸೆಫ್, ಗೀತಾ ಅತ್ತಾವರ, ಆಶೀಫ್ ಬೆಂಗ್ರೆ, ಹಾರ್ಬಟ್, ಫಯಾಝ್ ಅಮ್ಮೆಮ್ಮಾರ್,ಮಲ್ಲಿಕಾರ್ಜುನ  ಕೋಡಿಕಲ್, ರಿಯಾಝ್ ತಲಕಂಬು,  ಮಿಥುನ್ ಕುಮಾರ್, ಲಕ್ಷ್ಮಣ್ ಶೆಟ್ಟಿ, ರೋಬಿನ್ ಉಪಸ್ಥಿತರಿದ್ದರು.

ಧ್ವಜ ರಕ್ಷಕರಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ ಕಾರ್ಯನಿರ್ವಹಿಸಿದರು.

Similar News