ಕಾರು ಗುದ್ದಿ ಬಾನೆಟ್‌ ಮೇಲೆ ಯುವಕನನ್ನು ಎಳೆದೊಯ್ದ ಚಾಲಕಿ: ವಿಡಿಯೊ ವೈರಲ್

ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ

Update: 2023-01-20 12:15 GMT

ಬೆಂಗಳೂರು: ಅಪಘಾತವೆಸಗಿ ಬಳಿಕ ಸ್ಥಳದಿಂದ ಪರಾರಿಯಾಗಲೆತ್ನಿಸಿದ ಚಾಲಕಿಯೊಬ್ಬರು, ತಮ್ಮನ್ನು ತಡೆಯಲು ಬಂದ ಯುವಕನಿಗೆ ಕಾರು ಗುದ್ದಿಸಿ ಬಾನೆಟ್‌ ಮೇಲೆಯೇ ಕೆಲದೂರ ಹೊತ್ತೊಯ್ದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ ಆರೋಪದಲ್ಲಿ ಪೊಲೀಸರು ಯುವತಿ ಹಾಗೂ ಇತರ ನಾಲ್ವರ  ವಿರುದ್ಧ  307 ಸೆಕ್ಷನ್ ಅಡಿ ಪ್ರಕರಣ  ದಾಖಲಿಸಿದ್ದಾರೆ. 

ಏನಿದು ಘಟನೆ: ಉಲ್ಲಾಳ ಉಪನಗರ ರಸ್ತೆಯಲ್ಲಿ ಪ್ರಿಯಾಂಕಾ ಮತ್ತು ಆಕೆಯ ಪತಿ ಟಾಟಾ ನೆಕ್ಸಾನ್ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಒನ್ ವೇ ನಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ದರ್ಶನ್ ಅವರ ಕಾರಿಗೂ ನೆಕ್ಸಾನ್ ಕಾರಿನ ನಡುವೆ ಢಿಕ್ಕಿಯಾಗಿದೆ. ಈ ವೇಳೆ ದರ್ಶನ್ ಮತ್ತು ಪ್ರಿಯಾಂಕಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಪ್ರಿಯಾಂಕಾ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಗಲಾಟೆ ಸಂದರ್ಭದಲ್ಲೇ ದರ್ಶನ್ ಮತ್ತು ಸ್ನೇಹಿತರ ತಂಡ ಸ್ಥಳದಲ್ಲಿ ಸೇರುತ್ತಲೇ ಗಿಲಿಬಿಲಿಗೊಂಡ ಪ್ರಿಯಾಂಕಾ ಕಾರನ್ನು ಹತ್ತಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ ದರ್ಶನ್ ಪ್ರಿಯಾಂಕಾ ಅವರ ನೆಕ್ಸಾನ್ ಕಾರಿನ ಬಾನೆಟ್ ಹಿಡಿದುಕೊಂಡಿದ್ದಾರೆ. ಆದಾಗ್ಯೂ ಪ್ರಿಯಾಂಕಾ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ.

Similar News