ಉಚ್ಚಿಲ ಉರೂಸ್: ಜ.22 ರಂದು ಸರ್ವ ಧರ್ಮ ಸಮಾವೇಶ

Update: 2023-01-21 15:04 GMT

ಉಳ್ಳಾಲ: ಅಸ್ಸಯ್ಯದ್ ಶರೀಫುಲ್ ಅರಬಿ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಉಚ್ಚಿಲದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸರ್ವ ಧರ್ಮ ಸಮಾವೇಶ ಜ.22 ರಂದು ಸಂಜೆ 4 ಗಂಟೆಗೆ ಎಂ.ಪಿ.ಇಬ್ರಾಹೀಂ ಫೈಝಿ ಅವರ ನೇತೃತ್ವದಲ್ಲಿ ಜರುಗಲಿದೆ ಎಂದು ಉರೂಸ್ ಕಮಿಟಿ ಕಾರ್ಯದರ್ಶಿ ಸಲಾಂ ಉಚ್ಚಿಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ಅಸ್ಸಯ್ಯದ್ ಶಹೀರ್ ತಂಙಳ್ ಮಳ್ ಹರ್ ದುಆ ನೆರವೇರಿಸಲಿದ್ದಾರೆ. ಇಸ್ಮಾಯಿಲ್ ಹಾಜಿ ಕೊಪ್ಪಳ ಅಧ್ಯಕ್ಷ ತೆ ವಹಿಸಲಿದ್ದಾರೆ. ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಸಕ ಯು.ಟಿ. ಖಾದರ್, ಪದ್ಮನಾಭ ತಂತ್ರಿ, ಫಾದರ್ ವಿಕ್ಟರ್. ಡಿ ಮೆಲ್ಲೋ, ನಳಿನ್ ಕುಮಾರ್ ಕಟೀಲ್, ಡಾ.ಅಬ್ದುಲ್ಲ ಕುಂಞಿ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕಣಚೂರು ಮೋನು, ಮುಮ್ತಾಝ್ ಅಲಿ, ಹೈದರ್ ಪರ್ತಿಪ್ಪಾಡಿ, ಅಡ್ವಕೇಟ್ ಮುಜಾಫರ್ ಅಹ್ಮದ್, ಮನೋಜ್ ರಾಜೀವ್, ಮಿಥುನ್ ರೈ, ಐವನ್ ಡಿಸೋಜ, ಇಲ್ಯಾಸ್ ತುಂಬೆ, ಹನೀಫ್ ಖಾನ್ ಕೊಡಾಜೆ, ಮಜೀದ್ ಹಾಜಿ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಆಸೀಫ್ ಡೀಲ್ಸ್, ಮತ್ತಡಿ, ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ, ಅಬ್ದುಲ್ ಅಝೀಝ್ ಮೈಸೂರು ಬಾವ, ಎ.ಸಿ.ಪಿ.ದಿನಕರ್ ಶೆಟ್ಟಿ, ಇನ್ಸ್ಪೆಕ್ಟರ್ ಸಂದೀಪ್, ಉದ್ಯಮಿ ಎಂ.ಜೆ.ಮೋಹನ್, ಹರೇಕಳ ಹಾಜಬ್ಬ, ಪೆರಿಬೈಲ್ ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್, ಮುಹಮ್ಮದ್ ಅಲಿ ಜಿ.ಎಂ., ಸೈಫುಲ್ಲಾ ತಂಙಳ್, ಸಿದ್ದೀಕ್ ತಲಪಾಡಿ, ಅಬ್ದುಲ್ ಹಮೀದ್ ಯು.ಎಚ್, ಉದ್ಯಮಿ ಸಿದ್ದೀಕ್ ಉಚ್ಚಿಲ, ಮುಹಮ್ಮದ್ ಅಲಿ ಜಿ.ಐ.ಸಹಿತ  ದ.ಕ.ಜಿಲ್ಲೆಯ ಪ್ರಮುಖ ಸಾಮಾಜಿಕ, ರಾಜಕೀಯ ಮುಖಂಡರು ಹಾಗೂ ಸರ್ವ ಧರ್ಮ ಗುರುಗಳು, ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ ಎಂದರು.

ಜನವರಿ 25 ರಂದು ಬುಧವಾರ 9 ಗಂಟೆಗೆ ಉಲಮಾ, ಉಮರಾ ಕಾನ್ಫರೆನ್ಸ್ ಅಸಯ್ಯದ್ ಅತ್ತಾವುಲ್ಲ ತಂಙಳ್ ಅವರ ನೇತೃತ್ವದಲ್ಲಿ ಜರುಗಲಿದೆ. ಇದರ ಸಮಾರೋಪ ಸಮಾರಂಭ ಜ. 28 ರಂದು ರಾತ್ರಿ ಸಯ್ಯದುಲ್ ಉಲಮಾ ಅಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ರವರ ನೇತೃತ್ವದಲ್ಲಿ ನಡೆಯಲಿದೆ.

ಜನವರಿ 29 ರಂದು ಬೆಳಿಗ್ಗೆ 10 ಗಂಟೆಗೆ ಮೌಲಿದ್ ಪಾರಾಯಣ ಬಳಿಕ ಅನ್ನದಾನ ಕಾರ್ಯಕ್ರಮ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿಉಚ್ಚಿಲ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಅಧ್ಯಕ್ಷ, ಮಾಜಿ ಅಧ್ಯಕ್ಷ ಯುಪಿ ಮುಹಮ್ಮದ್ ಅಲಿ,ಅಬ್ದುಲ್ ಸಲಾಂ ಯು, ಅಬ್ಬಾಸ್ ಹಾಜಿ ಪೆರಿಬೈಲ್ ಉಪಸ್ಥಿತರಿದ್ದರು

Similar News