ಮಾಧ್ಯಮ ಸ್ವಾತಂತ್ರ್ಯದ ಬೆಳಕು ಚೆಲ್ಲುವ ಕಾರ್ಯವನ್ನು ಮುಂದುವರಿಸುವೆ: ಅಮೆರಿಕ

ಬಿಬಿಸಿ ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರ ವಿವಾದಕ್ಕೆ ಪ್ರತಿಕ್ರಿಯೆ

Update: 2023-01-26 15:32 GMT

‌ವಾಶಿಂಗ್ಟನ್,ಜ.26: 2002ರ ಗುಜರಾತ್ ಗಲಭೆ ಕುರಿತ ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರದ ಬಗ್ಗೆ  ಬುಧವಾರ  ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯು ಜಗತ್ತಿನಾದ್ಯಂತ ಮಾಧ್ಯಮ ಸ್ವಾತಂತ್ರ್ಯದ  ಮಹತ್ವದ ಬಗ್ಗೆ ಬೆಳಕುಚೆಲ್ಲುವ ಕಾರ್ಯವನ್ನು  ತಾನು ಮುಂದುವರಿಸುವುದಾಗಿ ಅಮೆರಿಕದ ವಿದೇಶಾಂಗ ತಿಳಿಸಿದೆ.

ಬಿಬಿಸಿ ವಿವಾದಾತ್ಮಕ ‘ದಿ ಮೋದಿ ಕ್ವಶ್ಚನ್’ (The Modi Question) ಸಾಕ್ಷ್ಯಚಿತ್ರವನ್ನು  ನಿಷೇಧಿಸುವುದು ಮಾಧ್ಯಮ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವೇ ಎಂಬ  ಸುದ್ದಿಗಾರರ ಪ್ರಶ್ನೆಗೆ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ (Ned Price) ಹೀಗೆ ಉತ್ತರಿಸಿದ್ದಾರೆ.

ಬಿಬಿಸಿ ನಿರ್ಮಾಣದ ‘ದಿ ಮೋದಿ ಕ್ವಶ್ಚನ್’ (The Modi Question) ಸಾಕ್ಷ್ಯ ಚಿತ್ರವು, 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಪೊಲೀಸರು ಹಿಂಸಾಚಾರ ನಿಯಂತ್ರಿಸುವುದಕ್ಕೆ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ  ತಡೆಯೊಡ್ಡಿದ್ದರು ಎಂದು  ಆರೋಪಿಸಿದೆ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕಾರಣವಾದ ನಿರ್ಭೀತಿಯ ವಾತಾವರಣ ನಿರ್ಮಾಣವಾಗಿದ್ದಕ್ಕೆ ನರೇಂದ್ರ ಮೋದಿಯವರೇ ನೇರ ಹೊಣೆಗಾರರಾಗಿದ್ದಾರೆಂದು  ಬ್ರಿಟಿಶ್ ಸರಕರಾವು ಕಳುಹಿಸಿದ್ದ ತಂಡವೊಂದು ವರದಿ ಮಾಡಿತ್ತೆಂದು ಆಪಾದಿಸಿತ್ತು.

‘‘ಮಾನವಹಕ್ಕುಗಳಂತೆ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡುವಂತಹ  ಅಭಿವ್ಯಕ್ತಿ ಸ್ವಾತಂತ್ರ, ಧಾರ್ಮಿಕ ಅಥವಾ ನಂಬಿಕೆಯ ಸ್ವಾತಂತ್ರ್ಯದಂತಹ ಪ್ರಜಾಸತ್ತಾತ್ಮಕ ತತ್ವಗಳ ಮಹತ್ವದ ಬಗ್ಗೆ ಬೆಳಕುಚೆಲ್ಲುವುದನ್ನು ನಾವು ಮುಂದುವರಿಸುತ್ತೇವೆ’’ ಎಂದು ಪ್ರೈಸ್ ತಿಳಿಸಿದರು. ‘‘ ಈ ಅಂಶದ ಆಧಾರದಲ್ಲಿಯೇ ನಾವು ಜಗತ್ತಿನಾದ್ಯಂತ ನಮ್ಮ ಬಾಂಧವ್ಯಗಳನ್ನು ರೂಪಿಸಿದ್ದೇವೆ. ಖಂಡಿತವಾಗಿಯೂ ಭಾರತದಲ್ಲಿಯೂ ನಾವು ಇದೇ ಅಂಶವನ್ನು  ಆಧರಿಸಿದ್ದೇವೆ ಎಂದವರು ಹೇಳಿದರು.

ಜನವರಿ 21ರಂದು  ಕೇಂದ್ರ ಸರಕಾರವು   ಬಿಬಿಸಿ ವಿವಾದಾತ್ಮಕ ಸಾಕ್ಷ್ಯ ಚಿತ್ರದ ಲಿಂಕ್ಗಳನ್ನು ತೆಗೆದುಹಾಕುವಂತೆ ಯೂಟ್ಯೂಬ್ ಹಾಗೂ ಟ್ವಿಟ್ಟರ್‌ ಗೆ ಆದೇಶಿಸಿತ್ತು.

ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ (BBC Documentary) ಪ್ರದರ್ಶನಕ್ಕೆ ದಿಲ್ಲಿಯ ಜೆಎನ್ ಯು , ಜಾಮಿಯಾ ಮಿಲಿಯಾ ವಿವಿಗಳಲ್ಲಿ ಅಡ್ಡಿಪಡಿಸಿದ ಘಟನೆಗಳು ವರದಿಯಾದ ಬೆನ್ನಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.  ಸಾಕ್ಷ್ಯಚಿತ್ರದ  ಪ್ರದರ್ಶನದ ಆಯೋಜಿಸಿದ್ದಕ್ಕಾಗಿ ಕನಿಷ್ಛಠ 12 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಬುಧವಾರ ಜಾಮಿಯಾ ಮಿಲಿಯಾ ವಿವಿಯಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಡೆಸಲು ಸಾಧ್ಯವಾಗಲಿಲ್ಲವೆಂದು ವರದಿಗಳು ತಿಳಿಸಿವೆ.

ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಮುನ್ನ ಜೆಎನ್ಯು ವಿಶ್ವವಿದ್ಯಾನಿಲಯಕ್ಕೆ ವಿದ್ಯುತ್ ಹಾಗೂ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಹಾಗೂ ತಮ್ಮ ಕಲ್ಲು ತೂರಾಟ ನಡೆಸಲಾಗಿತ್ತೆಂದು ವಿವಿಯ ವಿದ್ಯಾರ್ಥಿಗಳು ಆರೋಪಿಸಿದೆ. ಸಾಕ್ಷ್ಯಚಿತ್ರವನ್ನು ನೋಡಲು ಸಾಧ್ಯವಾಗದಂತೆ ಮಾಡುವ ಉದ್ದೇಶದಿಂದ ವಿದ್ಯುತ್ ಹಾಗೂ ಇಂಟರ್ನೆಟ್ಸಂಪರ್ಕವನ್ನು ಕಡಿದುಹಾಕಲಾಗಿತ್ತೆಂದು ಅವರು ಆರೋಪಿಸಿದ್ದಾರೆ.

ಹೈದರಾಬಾದ್ ವಿವಿಯಲ್ಲಿ  ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿ 

ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಕಾರ್ಯಕರ್ತರು ವಿವಿ.ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Similar News